ಮಡಿಕೇರಿ, ಜೂ. 3: ಮಡಿಕೇರಿ ನಗರಸಭೆ ಹಾಗೂ ಸೋಮವಾರಪೇಟೆ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಿಂದ ಇಂದು ಜಿಲ್ಲಾ ಯೋಜನಾ ಸಮಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಐವರು ಪ್ರತಿನಿಧಿಗಳು ಗೆಲುವು ಸಾಧಿಸುವ ಮೂಲಕ ಆಯ್ಕೆಗೊಂಡಿದ್ದಾರೆ.ಇಂದು ನಡೆದ ಚುನಾವಣೆ ಸಂದರ್ಭ ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಮಡಿಕೇರಿ ನಗರಸಭಾ ಸದಸ್ಯರುಗಳಾದ ಅನಿತಾ ಪೂವಯ್ಯ, ಶಿವಕುಮಾರಿ, ಸವಿತಾ ರಾಕೇಶ್ ಇವರುಗಳು ಜಯಗಳಿಸಿ ದ್ದಾರೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಿಂದ ಸುಶೀಲ ಹಾಗೂ ವೀರಾಜಪೇಟೆ ಪ.ಪಂ.ನಿಂದ ಸಚಿನ್ ಇವರುಗಳು ಆಯ್ಕೆಗೊಂಡಿದ್ದಾರೆ.

ಜಿಲ್ಲಾ ಯೋಜನಾ ಸಮಿತಿಯ ಜಿ.ಪಂ. ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿ.ಪಂ.

(ಮೊದಲ ಪುಟದಿಂದ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಪ್ರಸಕ್ತ ಆಯ್ಕೆಗೊಂಡಿರುವ ಪ್ರತಿನಿಧಿಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸಲಿದೆ.

ಇಂದು ಚುನಾವಣೆಯಲ್ಲಿ ಇತರ ಪಕ್ಷಗಳ ಪ್ರತಿನಿಧಿಗಳು ಕೂಡ ಕಣದಲ್ಲಿದ್ದರೂ, ಬಿಜೆಪಿಯ ಐವರು ಗೆಲುವು ಸಾಧಿಸಿದ್ದಾರೆ.

ಒಟ್ಟು 61 ಪ್ರತಿನಿಧಿಗಳಲ್ಲಿ 59 ಪ್ರತಿನಿಧಿಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ತಲಾ 5 ಮತಗಳನ್ನು ಚಲಾಯಿಸಿದ್ದರು. ಗೆಲುವಿನ ಬೆನ್ನಲ್ಲೇ ಬಿಜೆಪಿಯಿಂದ ವಿಜಯೋತ್ಸವದ ಘೋಷಣೆಗಳು ಮೊಳಗಿದವು.

ಪ್ರತಿಸ್ಪರ್ಧಿಗಳಾದ ಎಸ್‍ಡಿಪಿಐನ ಮನ್ಸೂರ್, ಪೀಟರ್ ಹಾಗೂ ಕಾಂಗ್ರೆಸ್‍ನ ಆದಂ, ಮೀನಕುಮಾರಿ, ಲೀಲಾ ಶೇಷಮ್ಮ, ಪರಾಭವಗೊಂಡಿದ್ದಾರೆ.