ಕುಶಾಲನಗರ, ಜೂ. 3: ಕುಶಾಲನಗರ ಬಸವನಹಳ್ಳಿ ಸಮೀಪ ನಿರಾಶ್ರಿತರ ಶಿಬಿರಕ್ಕೆ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ರೇವಣಪ್ಪ ಭೇಟಿ ನೀಡಿ ಶಿಬಿರದ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಶನಿವಾರ ಸಂಜೆ ವೇಳೆ ಆಗಮಿಸಿದ ರೇವಣಪ್ಪ ಸ್ಥಳೀಯ ಅಧಿಕಾರಿಗಳೊಂದಿಗೆ ಶಿಬಿರದಲ್ಲಿರುವ ನಿರಾಶ್ರಿತರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಪುನರ್ವಸತಿ ಕಲ್ಪಿಸಿದ ಕೇಂದ್ರಗಳಾದ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಮೂಲಕ ಕಲ್ಪಿಸಲಾದ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೇವಣಪ್ಪ, ಆದಷ್ಟು ಬೇಗ ನಿರಾಶ್ರಿತರಿಗೆ ಶಾಶ್ವತ ವ್ಯವಸ್ಥೆ ಒದಗಿಸುವಂತೆ ಅಧಿಕಾರಿಗಳಲ್ಲಿ ಸೂಚಿಸಿದರು. ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಕಾಶ್, ರಾಮೇಗೌಡ ಮತ್ತಿತರರು ಇದ್ದರು.