ಸೋಮವಾರಪೇಟೆ, ಜೂ. 3: ಸೋಮವಾರಪೇಟೆಯಿಂದ ಬೀಟಿಕಟ್ಟೆ ಮಾರ್ಗವಾಗಿ ಬಸವನಕೊಪ್ಪ-ಶನಿವಾರಸಂತೆ ಸಂಪರ್ಕಿಸುವ ಮುಖ್ಯರಸ್ತೆ ಹೊಂಡಾಗುಂಡಿಗಳ ಆಗರವಾಗಿ ಪರಿವರ್ತನೆಯಾಗಿದ್ದು, ಸಂಚಾರಕ್ಕೆ ತೊಡಕಾಗಿದೆ.ಈ ರಸ್ತೆಯ ಬಗ್ಗೆ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಗಳು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಬಸವನಕೊಪ್ಪ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ನಿರ್ಮಾಣ ಗೊಂಡಿರುವ ಗುಂಡಿಗಳನ್ನು ತಕ್ಷಣ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ರಸ್ತೆಯನ್ನು ದುರಸ್ತಿಗೊಳಿಸುವ ಮೂಲಕ ಈ ಭಾಗದ ಜನತೆಯ ಬಹುವರ್ಷದ ಬೇಡಿಕೆ ಈಡೇರಿಸಬೇಕೆಂದು ಗ್ರಾಮಸ್ಥರಾದ ನವೀನ್, ರವಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.