ಮಡಿಕೇರಿ, ಜೂ. 4: ಇಂದು ಭಾಗಮಂಡಲಕ್ಕೆ ಆಗಮಿಸಿದ್ದ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ನಿರ್ಮಲಾನಂದ ಮಹಾ ಸ್ವಾಮೀಜಿ ಅವರಿಗೆ ಇಲ್ಲಿನ ಸುದರ್ಶನ ವೃತ್ತದ ಬಳಿ ಮಡಿಕೇರಿ ಗೌಡ ಸಮಾಜದಿಂದ ಗೌರವ ಪೂರ್ವಕ ಸ್ವಾಗತ ನೀಡಲಾಯಿತು.ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಉಪಾಧ್ಯಕ್ಷ ಅಂಬೆಕಲ್ ನವೀನ್, ಪ್ರಮುಖರಾದ ಕೆ.ಡಿ. ದಯಾನಂದ, ಡಿ.ಎಸ್. ಆನಂದ, ಕೋಡಿ ಚಂದ್ರಶೇಖರ್, ಪಿ.ಎಂ. ಮನೋಹರ್, ಪರಿಚನ ಸತೀಶ್, ಕೆ. ಕಾಂಚನ ಕೀರ್ತನ್, ಕೆ. ಅನಂತಕುಮಾರ್, ಕೆ.ಕೆ. ಪೂರ್ಣಯ್ಯ, ವಸಂತ್ ಮೊದಲಾದವರು ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಸ್ವಾಗತಿಸಿ ಬೀಳ್ಕೊಟ್ಟರು.