ಮಡಿಕೇರಿ, ಜೂ. 4: 2016-17 ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿಯ ಸರಕಾರಿ ಪ್ರೌಢಶಾಲೆಯು ಶೇ.91 ರಷ್ಟು ಫಲಿತಾಂಶ ಗಳಿಸಿದ್ದು, ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಶಿಕ್ಷಕರುಗಳನ್ನು ತಾ. 9 ರಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಗುವದು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.

ಶಾಲಾ ಸಭಾಂಗಣದಲ್ಲಿ ಅಂದು ಬೆಳಗ್ಗೆ 11.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯ ಮುಖ್ಯ ಉಪವೈದ್ಯಾಧಿಕಾರಿ ಡಾ. ದೇವದಾಸ್ ಉದ್ಘಾಟಸಲಿದ್ದು, ದಲಿತ ಸಂಘರ್ಷ ಸಮಿತಿಯ ಸಂಚಾಲಕÀ ಹೆಚ್.ಎಲ್.ದಿವಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ಜಿಲ್ಲಾ ನೇತ್ರ ತಜ್ಞ ಡಾ. ಎಸ್.ಸಿ. ಪ್ರಶಾಂತ್ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್‍ಕುಮಾರ್ ಉಪಸ್ಥಿತರಿರುವರು. ಸಮಾಜ ಸೇವಕ ಎಸ್. ವಾಸುದೇವ್, ಸರಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆರ್.ಪಿ. ಚಂದ್ರಶೇಖರ್, ಪ್ರೌಢಶಾಲಾ ಉಪಪ್ರಾಂಶುಪಾಲ ಕೆ.ಪಿ. ಗುರುರಾಜ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸನ್ಮಾನಿಸಲ್ಪಡುವವರು

ಉಪಪ್ರಾಂಶುಪಾಲ ಗುರುರಾಜ ಕೆ.ಪಿ, ಗಣಿತ ಶಿಕ್ಷಕರುಗಳಾದ ದೇವಮ್ಮ ಬಿ.ಎಮ್, ವಿಜಯಲಕ್ಷ್ಮಿ ಕೆ, ಸೌಮ್ಯಲತಾ ಎಂ.ಡಿ, ಹಿಂದಿ ಶಿಕ್ಷಕರುಗಳಾದ ಸಿದ್ದೇಶ್ ಸಣ್ಣಗಿರಿ, ಗೀತಾ ಎಂ.ಎ, ಕನ್ನಡ ಶಿಕ್ಷಕರಾದ ಶಶಿಕಲಾ ಕೆ.ವಿ, ಲೀನಾ ಸುಮಿತಾ ರೋಚ್, ಆಂಗ್ಲ ಶಿಕ್ಷಕರಾದ ಅನಿತಾ ಎಸ್.ಡಿ., ಸಂಗೀತಾ ಟಿ. ನಾಯ್ಕ, ಸಮಾಜ ವಿಜ್ಞಾನ ಶಿಕ್ಷಕರಾದ ಮಂದಾಕಿನಿ ಬಿ.ಪಿ, ಪುಷ್ಪ ಡಿ.ಹೆಚ್., ವಿಜ್ಞಾನ ಶಿಕ್ಷಕರಾದ ಜಾನೆಟ್ ಐ.ಜೆ., ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ, ವೃತ್ತಿ ಶಿಕ್ಷಣ ಶಿಕ್ಷಕ ಸೋಮಯ್ಯ ನಾಯ್ಕ, ಪ್ರಥಮ ದರ್ಜೆ ಸಹಾಯಕರುಗಳಾದ ಕುಮಾರ್ ಎಸ್. ಹೊನ್ಯಾಳ, ದ್ವೀತಿಯ ದರ್ಜೆ ಸಹಾಯಕರುಗಳಾದ ದೀಪ್ತಿ ಕ್ರಿಸ್ಟಿನಾ ಎಂ.ಜೆ. ಹಾಗೂ ಲಲಿತ ಡಿ.ಎ. ಅವರುಗಳನ್ನು ಸನ್ಮಾನಿಸಲಾಗುವದೆಂದು ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ.

ಪ್ರಸ್ತುತ ವರ್ಷದಿಂದ ಸರಕಾರಿ ಜೂನಿಯರ್ ಕಾಲೇಜುಗಳ ಸಾಧನೆಯನ್ನು ಕೂಡ ಗುರುತಿಸಿ ಪ್ರಾಧ್ಯಾಪಕರುಗಳನ್ನು ಸನ್ಮಾನಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.