ಸೋಮವಾರಪೇಟೆ, ಜೂ. 4: ಮೈಸೂರು ಜಿಲ್ಲೆಯ ಗ್ರಾಮಾಂತರ ಬುದ್ದಿಜೀವಿಗಳ ಬಳಗದ 32ನೇ ವಾರ್ಷಿಕೋತ್ಸವದ ಅಂಗವಾಗಿ ನೀಡಲಾದ ವಿಶ್ವಕವಿ ಕುವೆಂಪು ಕವನ ಪುರಸ್ಕಾರಕ್ಕೆ ಇಲ್ಲಿನ ಲೇಖಕಿ ಶರ್ಮಿಳಾ ರಮೇಶ್ ಭಾಜನರಾಗಿದ್ದಾರೆ. ಮೈಸೂರಿನ ಜೆಎಸ್‍ಎಸ್‍ನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆದ ರಾಜ್ಯಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಶರ್ಮಿಳಾ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಬಳಗದ ಅಧ್ಯಕ್ಷ ಭೇರ್ಯ ರಾಮಕುಮಾರ್, ಹಿರಿಯ ಸಾಹಿತಿಗಳಾದ ಡಾ. ಜಿ.ಡಿ. ಜೋಶಿ, ಶಿವ ಬಿರದಕಟ್ಟೆ, ಪುಷ್ಪ ಅಯ್ಯಂಗಾರ್, ಚಿಕ್ಕೋಳ್ ಈಶ್ವರಪ್ಪ, ಹಂಚೇಟ್ಟಿರ ಫ್ಯಾನ್ಸಿ ಮುತ್ತಣ್ಣ ಉಪಸ್ಥಿತರಿದ್ದರು.