ಸಿದ್ದಾಪುರ, ಜೂ. 4: ಇತ್ತೀಚೆಗೆ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದುಬಾರೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟ ಮಾವುತ ಜೆ.ಕೆÀ ಅಣ್ಣುವಿನ ಪತ್ನಿ ಜೆ.ಕೆ. ಸಣ್ಣಕ್ಕ ಅವರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ,ಮಣಿ ಐದು ಸಾವಿರ ರೂಪಾಯಿಗಳ ಚೆಕ್ ಅನ್ನು ವಿತರಿಸಿದರು. ಈ ಸಂದರ್ಭ ಐಎನ್‍ಟಿಯುಸಿ ವತಿಯಿಂದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಎಂ.ಹೆಚ್ ಮೂಸಾ ಪೌಷ್ಠಿಕ ಅಹಾರಗಳ ಕಿಟ್ ವಿತರಿಸಿದರು.