ಶನಿವಾರಸಂತೆ, ಜೂ. 4: ಕೆರಗನಹಳ್ಳಿ ನಿವಾಸಿ, ಮಂಜುನಾಥ ಎಂಬವರ ಹನ್ನೊಂದು ವರ್ಷದ ಪುತ್ರಿ ಮೇಲೆ, ಕ್ಷುಲ್ಲಕ ಕಾರಣಕ್ಕಾಗಿ ರಾಮೇಗೌಡ ಎಂಬಾತ ಹೊಡೆದು ಗಾಯಗೊಳಿಸಿರುವ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಬಾಲಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.