ಗೋಣಿಕೊಪ್ಪ, ಜೂ. 6 : ಕಲ್ಕತ್ತ ಬೇಲೂರು ರಾಮಕೃಷ್ಣ ಮಠದ ಉಪಾಧ್ಯಕ್ಷರಾದ ಸ್ವಾಮಿ ಗೌತಮನಂದಾಜಿ ಮಹಾರಾಜ್ ತಾ. 8 ರಂದು ಕೊಡಗಿಗೆ ಭೇಟಿ ನೀಡಲಿದ್ದು ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಬೋಧ ಸ್ವರೊಪ ನಂದಾಜಿ ಅವರು ತಿಳಿಸಿದ್ದಾರೆ.

ಅಂದು ಮಡಿಕೇರಿಗೆ ಅಗಮಿಸಲಿರುವ ಸ್ವಾಮೀಜಿಯವರು ವೇದಾಂತ ಸಂಘದ ಶತಮಾನೊತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ವಿನೂತನಗೊಂಡ ಪ್ರಾರ್ಥನಾ ಮಂದಿರದಲ್ಲಿ ದಿವ್ಯತ್ರಯರಾದ ಭಗವನ್ ಶ್ರೀ ರಾಮಕೃಷ್ಣ ಪರಮಹಂಸ ಶ್ರೀ ಶಾರದಾದೇವಿಯರ, ಸ್ವಾಮಿ ವಿವೇಕಾನಂದರ ಭಾವಚಿತ್ರಗಳನ್ನು ಪ್ರತಿಷ್ಠಾಪಿಸಲ್ಲಿದ್ದಾರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಆಶ್ರೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ 3.30 ಗಂಟೆಗೆ ಪೊನ್ನಂಪೇಟೆ ರಾಮಕೃಷ್ಣ ಆಶ್ರಮಕ್ಕೆ ಅಗಮಿಸಲಿದ್ದು, ಭಕ್ತರು ಮತ್ತು ಸಾರ್ವಜನಿಕರಿಂದ ಗೌರವ ಸಮರ್ಪಣೆ ನಡೆಯಲಿದೆ. ಬಸವೇಶ್ವರ ದೇವಾಸ್ಥಾನದಿಂದ ಆಶ್ರಮದವರೆಗೆ ಭವ್ಯ ಮೆರವಣಿಗೆಯಲ್ಲಿ ಸ್ವಾಮಿಜಿಯವರನ್ನು ಸ್ವಾಗತಿಸಿ ಕರೆಯಲಾಗುವದು ಎಂದು ಅವರು ತಿಳಿಸಿದ್ದಾರೆ.

ತಾ. 9 ರಂದು ಬೆಳಿಗ್ಗೆ ಮೊದಲೇ ನೊಂದಾಯತಿಸಲ್ಪಟ್ಟವರಿಗೆ ಮಂತ್ರದೀಕ್ಷೆ ದಯಪಾಲಿಸಲಿದ್ದಾರೆ. ಸಂಜೆ 5.00 ಗಂಟೆಗೆ ಪ್ರಚವನ ಕಾರ್ಯಕ್ರಮ ನಡೆಯಲಿದೆ. ತಾ. 10ರ ಬೆಳಗ್ಗೆ ಪೂಜ್ಯರು ಪೊನ್ನಂಪೇಟೆಯಿಂದ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ. ಮಂತ್ರದೀಕ್ಷೆ ಪಡೆಯಲು ಇಚ್ಚಿಸುವವರು ಆಶ್ರಮದ ಅಧ್ಯಕ್ಷರಾದ ಬೋಧ ಸ್ವರೂಪನಂದಜೀ ಅವರನ್ನು ಸಂಪರ್ಕಿಸುವಂತಾಗಿದೆ.