ಮಡಿಕೇರಿ ಜೂ. 6 : ಪೊನ್ನಂಪೇಟೆ ಬ್ಲಾಕ್‍ನ ಬಿ.ಶೆಟ್ಟಿಗೇರಿ ಮಹಿಳಾ ಕಾಂಗ್ರೆಸ್ ವಲಯಾಧ್ಯಕ್ಷ ರನ್ನಾಗಿ ಮಂಜು ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷೆ ಜಿ. ಆರ್. ಪುಷ್ಪಲತಾ ತಿಳಿಸಿದ್ದಾರೆ.ಪೊನ್ನಂಪೇಟೆ ಬ್ಲಾಕ್‍ನ ಬಿ.ಶೆಟ್ಟಿಗೇರಿ ವಲಯ ಮಹಿಳಾ ಕಾಂಗ್ರೆಸ್ ಸಭೆ ಬ್ಲಾಕ್ ಅಧ್ಯಕ್ಷ ಕಡೇಮಾಡ ಕುಸುಮಾ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಿ. ಆರ್. ಪುಷ್ಪಲತಾ, ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್‍ನ್ನು ಸಂಘಟಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವದು ಎಂದರು.

ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಬಲ್ಲಣಮಾಡ ಶಾರದ, ಚೊಟ್ಟೆಪಂಡ ದರ್ಶಿನಿ, ಚೇಂದಿರ ಸವಿತಾ, ಮಾಂಗೇರ ಕನ್ನಿಕ, ಕಡೆÉೀಮಾಡ ರಶ್ಮಿ, ಕಮಲಾ ದಿನೇಶ್, ಬೀನಾ ಅರ್ಜುನ, ಕಡೆÉೀಮಾಡ ಲಲಿತಾ, ಕಡೆÉೀಮಾಡ ಭಾರತಿ, ಬಾನಂಡ ಅಶ್ವಿನಿ, ಚೇರಂಡ ಕಾಂತಿ, ಚಂದುರ ವಿದ್ಯಾ ಭವಾನಿ, ದಿವ್ಯಪ್ರಕಾಶ್, ಯಮುನಾ ದಿನೇಶ್, ಈಶ್ವರಪ್ಪ, ಜೈನಿ ಪೂವಯ್ಯ, ಭವಾನಿ ಜಯ, ಕಾವೇರಿ ಜೋಯಪ್ಪ, ಶಾಂತಿ ಸೋಮಯ್ಯ, ಅರ್ಜುನ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.