ಮಡಿಕೇರಿ, ಜೂ. 6: ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಬಿಜೆಪಿಯ ಆರೋಗ್ಯ ಪ್ರಕೋಷ್ಠದಿಂದ ಗುರುತಿಸಲ್ಪಟ್ಟಿರುವ ಒಟ್ಟು 62 ಮಂದಿಗೆ ವಿಕಲ ಚೇತನ ಗುರುತಿನ ಚೀಟಿಯೊಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಜಿಲ್ಲಾ ಆರೋಗ್ಯ ಪ್ರಕೋಷ್ಠ ಅಧ್ಯಕ್ಷ ಡಾ. ಬಿ.ಸಿ. ನವೀನ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೊಮ್ಮಾಡು ಹಾಡಿ ಹಾಗೂ ಇತರೆಡೆಗಳಲ್ಲಿ ಕಡು ಬಡ ಕುಟುಂಬಗಳಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಗುರುತಿಸಲ್ಪಟ್ಟ ತಾಲೂಕಿನ ವಿಕಲಚೇತನರಿಗೆ ಈ ಪ್ರಮಾಣ ಪತ್ರ ವಿತರಿಸಿದ್ದಾಗಿ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ಫಡ್ನೆಕರ್, ಸದಸ್ಯರುಗಳಾದ ಟಿ.ಕೆ. ಸುಮ, ಪಿ.ಟಿ ಸರೋಜ, ಬಿಜೆಪಿ ಪ್ರಮುಖರಾದ ಕಬೀರ್ ದಾಸ್, ದರ್ಶನ್ ಇಲಾಖೆಯ ನರಸಿಂಹ ಮೊದಲಾದವರು ಪಾಲ್ಗೊಂಡಿದ್ದರು.