ಮಡಿಕೇರಿ, ಜೂ. 5: ತಲಕಾವೇರಿಯಲ್ಲಿ ಮಳೆಗಾಗಿ ರಾಜ್ಯ ನೀರಾವರಿ ಸಚಿವರ ನೇತೃತ್ವದಲ್ಲಿ ಪರ್ಜನ್ಯ ಹೋಮ - ಪೂಜೆ ನಡೆಸಿರುವ ಕುರಿತು ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆ ಸಂಚಾಲಕ ಅಲ್ಲಾರಂಡ ವಿಠಲ್ ನಂಜಪ್ಪ ಸಲ್ಲದ ಟೀಕೆಯೊಂದಿಗೆ ಭಿತ್ತಿಪತ್ರ ಹಂಚಿರುವ ಬಗ್ಗೆ ದೇಶಪ್ರೇಮಿ ಯುವಕ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಈ ಕುರಿತು ಪ್ರತಿಕ್ರಿಯೆ ನೀಡಿ, ವಿಠಲ ನಂಜಪ್ಪರಂತಹ ವ್ಯಕ್ತಿ ಮಳೆಗಾಗಿ ಪೂಜೆ ಬೇಡ, ಗೋ ಸಂರಕ್ಷಣೆಗಾಗಿ ಗೋ ಭಕ್ಷಣೆ ಮಾಡಬೇಕೆಂದು ಧರ್ಮ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವದಾಗಿ ಖಂಡಿಸಿದ್ದಾರೆ. ಪ್ರಗತಿಪರರ ಹೆಸರಿನಲ್ಲಿ ಇಂತಹ ಕೃತ್ಯ ನಿಲ್ಲಿಸದಿದ್ದರೆ ತಕ್ಕ ಉತ್ತರ ನೀಡಬೇಕಾದೀತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಅರುಣ್ ಶೆಟ್ಟಿ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಕ್ರಮಕ್ಕೆ ಕೋರುವದಾಗಿ ಪ್ರತಿಕ್ರಿಯಿಸಿದ್ದಾರೆ.