ಕೂಡಿಗೆ, ಜೂ. 7: ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಕಲ್ಪಿಸಿರುವ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾನ ಇಲಾಖೆ ಆಯುಕ್ತ ಮಣಿವಣ್ಣನ್ ಅವರು ಹಾಡಿಯ ಗುಡಿಸಲಿನಲ್ಲಿಯೇ ವಾಸ್ತವ್ಯ ಹೂಡಿದರು. ಚಾಚೆ, ಬೆಡ್‍ಶೀಟ್‍ನೊಂದಿಗೆ ಮಲಗಿದ್ದರಲ್ಲದೆ ರಾತ್ರಿ ಹಾಗೂ ಬೆಳಿಗ್ಗೆ ಅಲ್ಲಿಯೇ ಊಟ - ಉಪಾಹಾರ ಸೇವಿಸಿದರು. ಇವರೊಂದಿಗೆ ಅಧಿಕಾರಿಗಳು ಇದ್ದರು.