ಮಡಿಕೇರಿ, ಜೂ. 9: ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟದ ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ಕಾರ್ಯ ಕೈಗೊಂಡರು. ನಗರದ ಗಾಂಧಿ ಮೈದಾನ ಸುತ್ತಮುತ್ತ, ಪ್ರವಾಸಿ ತಾಣ ರಾಜಾಸೀಟು ಹಾಗೂ ಪುಟಾಣಿ ರೈಲು ಭಾಗದಲ್ಲಿ ಸ್ವಚ್ಛತೆಯನ್ನು ನಡೆಸಿದರು. ಈ ಸಂದರ್ಭ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ, ಕಾರ್ಯದರ್ಶಿ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ದೇರಳ, ತಾಲೂಕು ಕಾರ್ಯದರ್ಶಿ ದಿಲೀಪ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಕೆ. ವೆಂಕಟೇಶ್, ಕಂದಾ ದೇವಯ್ಯ, ಸೋಮಪಾರಪೇಟೆ ತಾಲೂಕು ಅಧ್ಯಕ್ಷ ರವಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ಶೀಲಾ ಬೋಪಣ್ಣ ಹಾಗೂ ವಿವಿಧ ಯುವ ಸಂಘಗಳ ಪದಾಧಿಕಾರಿಗಳಾದ ಕುಮಾರ್, ಗಣೇಶ್, ಮಹೇಶ್ ಮತ್ತು ಇನ್ನಿತರರು ಇದ್ದರು.