ಸೋಮವಾರಪೇಟೆ, ಜೂ.10: ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಲು ಶೇಖರಿಸಿಟ್ಟಿದ್ದ ಪುಳಿಗಂಜಿ ಹಾಗೂ ಪರಿಕರಗಳನ್ನು ಸೋಮವಾರಪೇಟೆ ಅಬಕಾರಿ ಉಪ ವಿಭಾಗದ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಸಮೀಪದ ಹಂಡ್ಲಿ ಗ್ರಾಮದ ಕಿತ್ತೂರು ಕೊಪ್ಪಲು ಗ್ರಾಮದ ನಿವಾಸಿಯಾದ ಕೆ.ಎ.ಉಲ್ಲಾಸ್ ಎಂಬವರ ಮನೆ ಮತ್ತು ತೋಟದಲ್ಲಿ ಸಂಗ್ರಹಿಸಿಟ್ಟಿದ್ದ 45 ಲೀ ಪುಳಿಗಂಜಿ ಮತ್ತು ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಿತ್ತೂರುಕೊಪ್ಪಲು ಗ್ರಾಮದಲ್ಲಿನ ಅಕ್ರಮದ ಬಗ್ಗೆ ಮಾಹಿತಿ ಪಡೆದ ಇಲ್ಲಿನ ಅಬಕಾರಿ ಉಪವಿಭಾಗದ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರುಗಳಾದ ಬಿ.ಎಸ್. ಲೋಕೇಶ್ ಮತ್ತು ಎ.ಕೆ.ಅಪೂರ್ವ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.