ಸೋಮವಾರಪೇಟೆ, ಜೂ. 10: ಟಿಂಬರ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಕೆಳಬಿದ್ದು ಲಾರಿ ಚಾಲಕರೋರ್ವರು ಸಾವನ್ನಪ್ಪಿರುವ ಘಟನೆ ಸಮೀಪದ ಬೇಳೂರು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಬಜೆಗುಂಡಿ ಗ್ರಾಮ ನಿವಾಸಿ ಟಿ. ಬಸವರಾಜ್(40) ಎಂಬವರೇ ಸಾವನ್ನಪ್ಪಿದವರಾಗಿದ್ದು, ಬೇಳೂರು ಗ್ರಾಮದಲ್ಲಿ ಲಾರಿಗೆ ಟಿಂಬರ್ ಮರಗಳನ್ನು ಜೋಡಿಸುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ತೋಟದ ಒಳಗಿದ್ದ ಸಿಲ್ವರ್ ಮರಗಳನ್ನು ಎಳೆಯುತ್ತಿದ್ದ ಟ್ರ್ಯಾಕ್ಟರ್‍ನ ಹಿಂಬದಿ ಕುಳಿತಿದ್ದ ಬಸವರಾಜ್ ಅವರು ಆಯತಪ್ಪಿ ಕೆಳಬಿದ್ದಿದ್ದು, ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರು ಪತ್ನಿ ಭವ್ಯ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ತಾ. 11ರಂದು (ಇಂದು) ಅಂತ್ಯಕ್ರಿಯೆ ನೆರವೇರಲಿದೆ. ಮೃತರ ನಿಧನಕ್ಕೆ ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಸಂತಾಪ ಸೂಚಿಸಿದೆ.