ವಿರಾಜಪೇಟೆ, ಜೂ, 10: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾ. 12ರಂದು ಗಂಭೀರ ಕಾಯಿಲೆಗಳಿಗೆ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜೆ.ಎಸ್.ಎಸ್. ಆಸ್ಪತ್ರೆಯ ಶಿಬಿರದ ಸಂಚಾಲಕ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಾಜಪೇಯಿ ಆರೋಗ್ಯಶ್ರೀ, ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವತಿಯಿಂದ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು ತಜ್ಞ ವೈದ್ಯರು ಹಾಗೂ ವೈದ್ಯಕೀಯ ಉಪಕರಣಗಳ ನೆರವಿನಿಂದ ತಪಾಸಣೆ ನಡಸಲಾಗುವದು. ಬಿ.ಪಿ.ಎಲ್. ಅಂತ್ಯೋದಯ ಕಾರ್ಡುದಾರರಿಗೂ ಅವಕಾಶವಿದೆ.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ ಚಿಕಿತ್ಸೆ, ನರರೋಗ ಶಸ್ತ್ರ ಚಿಕಿತ್ಸೆ, ನವ ಜಾತ ಶಿಶು ಶಸ್ತ್ರ ಚಿಕಿತ್ಸೆ ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ರೋಗಗಳ ಕುರಿತು ತಪಾಸಣೆ ನಡೆಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೋ.8970827173 ಸಂಪರ್ಕಿಸಬಹುದು ಎಂದು ಪ್ರಸಾದ್ ತಿಳಿಸಿದರು.

ಗೋಷ್ಠಿಯಲ್ಲಿ ಟ್ರಸ್ಟ್‍ನ ಸಂಯೋಜಕರಾದ ತೇಜಸ್, ಇಲ್ಲಿನ ಆಸ್ಪತ್ರೆಯ ಆರೋಗ್ಯ ಮಿತ್ರದ ದಿಲೀಪ್ ಉಪಸ್ಥಿತರಿದ್ದರು.