ಮಡಿಕೇರಿ, ಜೂ. 11: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಕುಶಾಲನಗರದ ಲೋಪಾಮುದ್ರಾ ಕಣ್ಣಿನ ಆಸ್ಪತ್ರೆ ಮತ್ತು ಮೈಸೂರಿನ ಅಸೋಸಿಯೇಷನ್ ಆಫ್ ಫಿಸಿಷಿಯನ್ ಆಫ್ ಮೈಸೂರು ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಡಯಾಬಿಟಿಸ್ ಮತ್ತು ಡಯಾಬಿಟೀಸ್‍ನಿಂದ ಬರುವ ಕಣ್ಣಿನ ತೊಂದರೆಗಳ ಬಗ್ಗೆ ಶಿಬಿರದಲ್ಲಿ ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯ ಸಲಹೆ ನೀಡಿದರು.

ಮೈಸೂರಿನ ತಜ್ಞ ವೈದ್ಯ ಡಾ. ಆರ್. ಮಂಜುನಾಥ್ ಶಿಬಿರವನ್ನು ಉದ್ಘಾಟಿಸಿದರು.

ಶಿಬಿರದಲ್ಲಿ ಸುಮಾರು 50 ಮಂದಿ ತಮ್ಮ ಆರೋಗ್ಯವನ್ನು ತಪಾಸಣೆ

(ಮೊದಲ ಪುಟದಿಂದ) ನಡೆಸಿದರು. ತಜ್ಞ ವೈದ್ಯರಾದ ಡಾ. ಭಾನುಕುಮಾರ್, ಡಾ. ಶಶಿಧರ್, ಡಾ. ಲಕ್ಷ್ಮೇಗೌಡ, ಡಾ. ಪ್ರಸನ್ನ ಕುಮಾರ್, ಡಾ. ಹೆಚ್.ಆರ್. ಪ್ರಸನ್ನಕುಮಾರ್, ಡಾ. ಶ್ರೀನಾಥ್, ಡಾ. ಬಸವರಾಜು, ಡಾ. ಮಾತಂಡ ಅಯ್ಯಪ್ಪ, ಡಾ. ಅಮೃತ ನಾಣಯ್ಯ ತಪಾಸಣೆ ಹಾಗೂ ಸಲಹೆ ನೀಡಿದರು

.