ಕುಶಾಲನಗರ, ಜೂ. 12: ಕುಶಾಲನಗರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಹೊಸ ಕಾರು ಖರೀದಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಮಡಿಕೇರಿ ಸರಕಾರಿ ಆಸ್ಪತ್ರೆ ವೈದ್ಯರಾದ ಡಾ. ಶ್ರೀಧರ್ ಚಾಲಿಸುತ್ತಿದ್ದ ನೂತನ ಕಾರು ಬಡಾವಣೆಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಅಡ್ಡ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗುವದು ತಪ್ಪಿಸಲು ಪ್ರಯತ್ನಿಸಿದ ಸಂದರ್ಭ ಕಾರು ಪಲ್ಟಿಯಾಗಿದೆ.ಈ ಸಂದರ್ಭ ಕಾರಿನಲ್ಲಿದ್ದ ಡಾ. ಶ್ರೀಧರ್, ಪತ್ನಿ, ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದ್ವಿಚಕ್ರ ಸವಾರ ನಾಸಿರ್ ಎಂಬಾತನಿಗೂ ಕೂಡ ಸಣ್ಣಪುಟ್ಟ ಗಾಯಗಳುಂಟಾಗಿವೆ. ಕಾರು ಮಗುಚಿದ ಹಿನ್ನೆಲೆಯಲ್ಲಿ ನಜ್ಜುಗುಜ್ಜಾಗಿದೆ.ಕುಶಾಲನಗರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.