ಮಡಿಕೇರಿ, ಜೂ.11 : ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್(ಐಎನ್‍ಟಿಯುಸಿ)ನ ಕೊಡಗು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಎಂ.ಮುತ್ತಪ್ಪ, ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಜಿಲ್ಲಾ ಉಪಾಧ್ಯಕ್ಷರುಗಳಾಗಿ ಸೋಮವಾರಪೇಟೆ ತಾಲೂಕಿನ ತೊರೆನೂರಿನ ಬಿ. ಕಿಶೋರ್ ಕುಮಾರ್, ಕೊಡ್ಲಿಪೇಟೆಯ ಕೆ.ಎಸ್. ಯತೀಶ್, ವೀರಾಜಪೇಟೆ ತಾಲೂಕಿನ ಒಂಟಿಯಂಗಡಿಯ ಗೋಪಾಲಕೃಷ್ಣ, ನೆಲ್ಯಹುದಿಕೇರಿಯ ಎ.ಕೆ. ಹಕೀಂ ಮತ್ತು ಮಡಿಕೇರಿ ತಾಲೂಕಿನ ಬಲ್ಲಮಾವಟಿಯ ಟಿ.ಪಿ. ನಾಣಯ್ಯ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕೂಡು ಮಂಗಳೂರಿನ ಟಿ.ಡಿ. ಗೋವಿಂದರಾಜ್ ದಾಸ್ ಮತ್ತು ಹೊದವಾಡ ಗ್ರಾಮದ ಹೆಚ್.ಎ. ಹಂಸ ಆಯ್ಕೆಯಾಗಿದ್ದಾರೆ. ಜಿಲ್ಲಾ ವಕ್ತಾರರಾಗಿ ಕುಶಾಲನಗರದ ಅಜ್ಜಳ್ಳಿ ರವಿ, ಕಾರ್ಯದರ್ಶಿಗಳಾಗಿ ಕೊಡ್ಲಿಪೇಟೆಯ ಕಿತ್ತೂರಿನ ಗಿರೀಶ್, ನೆಲ್ಯಹುದಿಕೇರಿಯ ಪಿ.ಎಸ್. ಸಜಿ, ಮಡಿಕೇರಿಯ ಮೊಣ್ಣಪ್ಪ ಕಾನೆಹಿತ್ಲು, ಸೋಮವಾರಪೇಟೆಯ ಎಂ.ಇ. ಅಶ್ರಫ್, ಜಿಲ್ಲಾ ಸಹಕಾರ್ಯದರ್ಶಿ ಗಳಾಗಿ ಹೊಸಬೀಡು ಗ್ರಾಮದ ಹೆಚ್.ಪಿ. ಹೂವಯ್ಯ, ಹಾರಂಗಿಯ ಎನ್. ಶ್ರೀನಿವಾಸ್ ಕುಮಾರ್, ಏಳನೇ ಹೊಸಕೋಟೆಯ ಎ.ಪಿ. ರಮೇಶ್, ಹೆಬ್ಬಾಲೆಯ ಎಂ.ಎಸ್. ಮಂಜುನಾಥ ಕುಮಾರ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೂಡ್ಲೂರಿನ ಕೆ.ಎನ್. ಲಕ್ಷ್ಮಣ ರಾಜೇ ಅರಸ್, ಕೂಡುಮಂಗಳೂರಿನ ಕೆ.ಪಿ. ಸಣ್ಣಪ್ಪ, ಕೂಡ್ಲೂರು ಮಂಜುನಾಥ್, ಮಂಜಯ್ಯ, ದೊಡ್ಡಬೆಟ್ಟಗೇರಿಯ ಸಣ್ಣಯ್ಯ, ಕಿರಗಂದೂರಿನ ಭರತ್, ಮಳ್ತೆಯ ಉದಯ ಕುಮಾರ್, ಬಜೆಗುಂಡಿ ಸಿ.ವಿ. ಪುಟ್ಟರಾಜು, ಸುಂಟಿಕೊಪ್ಪದ ಎಂ.ಎಸ್. ರವಿ, ಉಲುಗುಲಿಯ ಕೆ.ಎಂ. ಆಲಿ ಕುಟ್ಟಿ, ರಾಮನಹಳ್ಳಿಯ ಎಂ.ಎಂ. ಮಹಮ್ಮದಾಲಿ, ದೊಡ್ಡಕುಂದದ ಕೆ.ಎಸ್. ಜನಾರ್ಧನ್, ಚಿಟ್ಟಂಡೆಯ ಎರೆಟಂಡ ಇ. ಮುಸ್ತಾಫ, ಕರಡಿಗೋಡಿನ ಕೆ.ಸಿ. ನಾರಾಯಣ ಹಾಗೂ ದೊಡ್ಡಕುಂದದ ಎಂ.ಎಂ. ಅಬೂಬಕ್ಕರ್ ಆಯ್ಕೆಯಾಗಿದ್ದಾರೆ ಎಂದು ಎನ್.ಎಂಮುತ್ತಪ್ಪ ಮಾಹಿತಿ ನೀಡಿದರು.