ಶನಿವಾರಸಂತೆ, ಜೂ. 11: ಗುಡುಗಳಲೆ ಜಾತ್ರಾ ಮೈದಾನದಲ್ಲಿನ ಕಾಳಿಕಾಂಭಾ ದೇವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.

ಸಾಮೂಹಿಕ ಉಪನಯನ, ಕುಂಕುಮಾರ್ಚನೆ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.

ಹಾಸನ, ಅರಮಾದನಹಳ್ಳಿಯ ಸುಜ್ಞಾನ ಪ್ರಭುಪೀಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ ಮೈಸೂರಿನ ವೇದಬ್ರಹ್ಮ ದಯಾನಂದ ಶರ್ಮ ನೇತೃತ್ವ ವಹಿಸಿದ್ದರು.

ಬೆಳಿಗ್ಗೆ ಮಹಾಗಣಪತಿ ಪೂಜೆ, ಸ್ವಸ್ತಿ ಶ್ರೀ ಪುಣ್ಯಾಹವಾಜನ, ಮಾತೃಕಾನಂದಿ, ಸಮಗ್ರಹಾರಾಧನೆ, ಅಗ್ನಿ ಪ್ರತಿಷ್ಠಾಪನೆ, ದುರ್ಗಾ ಹೋಮ ಮುಂತಾದ ಪೂಜೆ ನೆರವೇರಿತು.

ಬಳಿಕ ಬ್ರಹ್ಮೋಪದೇಶ, 13 ವಟುಗಳಿಗೆ ಸಾಮೂಹಿಕ ಉಪನಯನ ನಡೆದು ಮಹಿಳೆಯರು ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಎಲ್. ಲಕ್ಷ್ಮಣಾಚಾರ್ ಹಾಗೂ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು, ಶ್ರೀರಾಮಭಜನಾ ಮಂಡಳಿ ಸದಸ್ಯರು ಹಾಜರಿದ್ದರು.