ಬೆಂಗಳೂರು, ಜೂ. 13: ಪ್ಯಾರಿಸ್‍ನಲ್ಲಿ ನಡೆದ ಫ್ರೆಂಜ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ವಿಭಾಗದ ಫೈನಲ್‍ನಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಭಾಜನರಾದ ಭಾರತದ ಟೆನ್ನಿಸ್ ಪಟು ಕೊಡಗಿನ ಯುವಕ ಮಚ್ಚಂಡ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರಲ್ಲದೆ, ರೋಹನ್ ಬೋಪಣ್ಣ ಅವರಿಗೆ 10ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದರು.