ಮಡಿಕೇರಿ, ಜೂ. 13: ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮರಗೋಡುವಿನ ಹೊಸ್ಕೇರಿಯಲ್ಲಿ ನಡೆದಿದ್ದ ಮೋಹನ್ ಎಂಬವರ ಹತ್ಯೆ ಪ್ರಕರಣದ ಆರೋಪಿ ಜೇನು ಕುರುಬರ ಮುತ್ತ ಎಂಬಾತನನ್ನು ಮರಗೋಡು ವಿನಲ್ಲಿ ಇಂದು ಪೊಲೀಸರು ಬಂಧಿಸಿ ದ್ದಾರೆ. ತನ್ನ ಪತ್ನಿ ಹಾಗೂ ಮೋಹನ್ ನಡುವೆ ಅನೈತಿಕ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಒಂದು ದಿನ ಅವರಿಬ್ಬರು ಒಟ್ಟಿಗೆ ಇದ್ದ ವೇಳೆ ನಾನು ಇಬ್ಬರ ಮೇಲೆಯೂ ಕತ್ತಿ ಪ್ರಹಾರ ಮಾಡಿದ್ದು, ಮೋಹನ್ ಸಾವನ್ನಪ್ಪಿದ. ತನ್ನ ಪತ್ನಿ ಗಾಯಗೊಂಡಿದ್ದಳು ಎಂದು ಆರೋಪಿ ಪೊಲೀಸರೆದುರು ಹೇಳಿಕೆ ನೀಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎಸ್‍ಪಿ ರಾಜೇಂದ್ರ ಪ್ರಸಾದ್, ಡಿವೈಎಸ್‍ಪಿ ನಾಗಪ್ಪ ಮಾರ್ಗದರ್ಶ ನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿ ಶಿವಪ್ರಕಾಶ್, ಎಎಸ್‍ಐ ಹೊನ್ನಪ್ಪ, ಸಿಬ್ಬಂದಿಗಳಾದ ಹನೀಫ್, ಶಿವರಾಜೇಗೌಡ, ಇಬ್ರಾಹಿಂ, ತೀರ್ಥಕುಮಾರ್, ದಿನೇಶ್, ಚಾಲಕ ಅರುಣ್ ಭಾಗವಹಿಸಿದ್ದರು.