ಕೂಡಿಗೆ, ಜೂ. 13: ಬೈಕ್ ಸವಾರ ಬಿದ್ದು ಸ್ಥಳದಲ್ಲಿಯೇ ದುರ್ಮರಣ ಕ್ಕೀಡಾದ ಘಟನೆ ಮಾದಾಪಟ್ಟಣ ಸಮೀಪ ಗೊಂದಿಬಸವನಹಳ್ಳಿ ರಸ್ತೆಯಲ್ಲಿ ನಡೆದಿದೆ.

ಗೊಂದಿಬಸವನಹಳ್ಳಿ ನಿವಾಸಿ ಮೂಟೆ ಚಂದ್ರ ಅವರ ಪುತ್ರ ಅಣ್ಣಯ್ಯ (32) ತನ್ನ ಬೈಕ್‍ನಲ್ಲಿ ಗುಡ್ಡೆಹೊಸೂರು ಕಡೆಗೆ ತೆರಳುತ್ತಿದ್ದಾಗ ಕಲ್ಲಿನ ಮೇಲೆ ಹತ್ತಿದ ಪರಿಣಾಮ ಆಯತಪ್ಪಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಅಣ್ಣಯ್ಯ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕುಶಾಲನಗರ ಠಾಣಾಧಿಕಾರಿ ಜಗದೀಶ್ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.