ಸೋಮವಾರಪೇಟೆ, ಜೂ. 15: ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ವಾಸದ ಮನೆಗೆ ನುಗ್ಗಿದ ಘಟನೆ ದೊಡ್ಡಕುಂದಾ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ.

ಸಕಲೇಶಪುರದಿಂದ ತೋಟಕ್ಕೆ ಗಿಡಗಳನ್ನು ಸಾಗಿಸುತ್ತಿದ್ದ, ಕುಟ್ಟಪ್ಪ ಎಂಬವರು ಚಾಲಿಸುತ್ತಿದ್ದ ಜೀಪು ದೊಡ್ಡಕುಂದಾ ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಗ್ರಾಮದ ಮಹಾಬಲ ರೈ ಎಂಬವರಿಗೆ ಸೇರಿದ ಮನೆಯ ಆವರಣ ಗೋಡೆಯನ್ನು ಪುಡಿಗೈದು, ಕಾರ್ ಶೆಡ್ಡ್‍ನ್ನು ನೆಲಸಮಗೊಳಿಸಿ ಗೋಡೆಗೆ ಢಿಕ್ಕಿ ಹೊಡೆದಿದೆ.

ಮನೆಯ ಮುಂಭಾಗ ಯಾರೂ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯಿಂದ ಜೀಪ್‍ನ ಮುಂಭಾಗ ಜಖಂಗೊಂಡಿದ್ದು, ಕುಟ್ಟಪ್ಪ ಹಾಗೂ ಪತ್ನಿ ಕಾವೇರಮ್ಮ ಅವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.