ಶ್ರೀಮಂಗಲ, ಜೂ. 16: ಕುಟ್ಟ ಗ್ರಾ.ಪಂ. ವ್ಯಾಪ್ತಿಯ ನಾತಂಗಲ್, ಉಳ್ಳಿಪಾರೆಯ 40 ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾ.ಪಂ.ನಿಂದ ಕಡಿತ ಮಾಡಲಾಗಿದೆ ಎಂದು ಕುಟ್ಟದ ಜೆ.ಡಿ.ಎಸ್ ಪಕ್ಷದ ಮುಖಂಡÀ ರೆನ್ನಿ ಹಾಗೂ ಇತರರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕುಟ್ಟ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿ.ಡಿ.ಓ. ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸ್ಥಳಕ್ಕೆ ಮಾಧ್ಯಮದವರನ್ನು ಭೇಟಿ ಮಾಡಿ ವಾಸ್ತವಾಂಶವನ್ನು ವಿವರಿಸಿದ್ದಾರೆ. ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾ.ಪಂ.ನಿಂದ ಕುಡಿಯುವ ನೀರಿನ ಸಂಪರ್ಕ ಪಡೆಯಲು ರೂ. 2 ಸಾವಿರ ಪಾವತಿಸಬೇಕಾಗಿದೆ. ಸಂಪರ್ಕ ಪಡೆದ ನಂತರ ಪ್ರತಿ ತಿಂಗಳು ರೂ.100 ಶುಲ್ಕ ನೀಡಬೇಕಾಗಿದೆ. ಅದರಂತೆ ನಾತಂಗಲ್ ಹಾಗೂ ಉಳ್ಳಿಪಾರೆಯ ಹಲವಾರು ನಿವಾಸಿಗಳಿಗೆ ಬೋರ್‍ವೆಲ್‍ನಿಂದ ನೀರನ್ನು ಟ್ಯಾಂಕ್‍ಗೆ ಸಂಪರ್ಕ ನೀಡಿ ಟ್ಯಾಂಕ್‍ನಿಂದ ಸಂಪರ್ಕ ಹೊಂದಿಕೊಂಡಿರುವ ಕುಟುಂಬಗಳಿಗೆ ಪೈಪ್‍ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾ.ಪಂ. ಮೇಲೆ ಆರೋಪ ಮಾಡಿರುವ ರೆನ್ನಿ ಅವರು ರೂ. 2 ಸಾವಿರ ಪಾವತಿಸದೆ ಸಂಪರ್ಕ ಪಡೆದುಕೊಂಡಿದ್ದು, ನಿಯಮಾನುಸಾರ ನೋಟೀಸ್ ಜಾರಿ ಮಾಡಿ, ಮುಂಗಡ ಪಾವತಿಸಲು ಕೇಳಿದ್ದರೂ ಅದಕ್ಕೆ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಒಂದು ಸಂಪರ್ಕವನ್ನು ಮಾತ್ರ ಕಡಿತಮಾಡಲಾಗಿದೆ ಎಂದು ಗ್ರಾ.ಪಂ. ಸ್ಪಷ್ಟಪಡಿಸಿದೆ.

ಖುದ್ದು ಜಾಗ ಪರಿಶೀಲಿಸಿದ ಸಂದರ್ಭ ಇತರ ನಿವಾಸಿಗಳಾದ ಚಂದ್ರಶೇಖರ್, ಸರೋಜಿನಿ, ನೀಲಿ, ಕುಂಞÂ, ಮಣಿಕಂಠ, ಶಿವರಾಜ್, ತೋಲ, ವೇಲಾಯುಧ, ಮೀನಾ ಅವರು ನೀರಿನ ಸಂಪರ್ಕಕ್ಕೆ ಯಾವದೇ ತೊಂದರೆಯಾಗಿಲ್ಲ. ನಾತಂಗಲ್ ಹಾಗೂ ಉಳ್ಳಿಪಾರೆಯಲ್ಲಿ 40 ಕುಟುಂಬಗಳಿಗೆ ನೀರಿನ ಸಂಪರ್ಕ ಕಡಿತ ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ ಎಂದು