ಮಡಿಕೇರಿ, ಜೂ. 17: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಐತಿಚಂಡ ರಮೇಶ್ ಉತ್ತಪ್ಪ, ಕ್ರೀಡಾ ಕ್ಷೇತ್ರದಲ್ಲಿ ಬಾಬು ಸೋಮಯ್ಯ, ಸಮಾಜ ಸೇವೆಯಲ್ಲಿ ರಾಮಚಂದ್ರ, ಮಾಧ್ಯಮ ಕ್ಷೇತ್ರದಲ್ಲಿ ಕಾಯಪಂಡ ಶಶಿ ಸೋಮಯ್ಯ, ಶಿಕ್ಷಣ ಕ್ಷೇತ್ರದಲ್ಲಿ ಕಂಬೀರಂಡ ಕಿಟ್ಟು ಕಾಳಪ್ಪ, ಜನಪದ ಕ್ಷೇತ್ರದಲ್ಲಿ ಮಲೆಯರ ಚಂಗಪ್ಪ, ನಾಟಿ ವೈದ್ಯ ಬಳ್ಳಡ್ಕ ಅಪ್ಪಾಜಿ, ಕೃಷಿ ಕ್ಷೇತ್ರದಲ್ಲಿ ಕೊಪ್ಪದ ಭುವನೇಶ್ವರ, ನೃತ್ಯ ಕ್ಷೇತ್ರದಲ್ಲಿ ಜಲಜ ನಾಗರಾಜ್, ವಾದ್ಯ ಸಂಗೀತದಲ್ಲಿ ಅಂಬಳೆ ಸತ್ಯ ಪ್ರಸಾದ್, ರಂಗಭೂಮಿಯಲ್ಲಿ ಪಿ.ಯು. ಸುಂದರ, ಕಲೆಯಲ್ಲಿ ಪದ್ಮನಾಭ, ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸೂಫಿಯಾನ, ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ನಿರೀಕ್ಷ, ದೆಹಲಿಯಲ್ಲಿ ಎನ್‍ಸಿಸಿ ಆರ್.ಡಿ. ಪೆರೇಡ್ ಮುನ್ನಡೆಸಿದ ಅಜ್ಜಿನಿಕಂಡ ಐಶ್ವರ್ಯ ದೇಚಮ್ಮ, ಇವರುಗಳನ್ನು ಸನ್ಮಾನಿಸಲಾಯಿತು.