ಶನಿವಾರಸಂತೆ, ಜೂ. 17 : ಶನಿವಾರಸಂತೆ ಬೈಪಾಸ್ ರಸ್ತೆಯ ಪ್ರವಾಸಿ ಮಂದಿರದ ಬಳಿ ಇರುವ ಮೂಕಾಂಬಿಕಾ ಕಾಫಿಲಿಂಕ್ಸ್ ಮುಂಭಾಗ ಶನಿವಾರ ಬೆಳಿಗ್ಗೆ 8 ಗಂಟೆಗೆ ಅಂಗಡಿಯ ಮಾಲೀಕರ ಗಮನವನ್ನು ಬೇರೆಡೆ ಸೆಳೆದು, ಅಪರಿಚಿತರು ಕರಿ ಮೆಣಸು ವ್ಯಾಪಾರ ಮಾಡುವ ಸೋಗು ಹಾಕಿ ಡ್ರಾದಲ್ಲಿದ್ದ ರೂ. 2 ಲಕ್ಷ ದೋಚಿಕೊಂಡು ಹೋದ ದುಷ್ಕøತ್ಯ ನಡೆದಿದೆ.ಅಂಗಡಿಯ ಮಾಲಿಕ ಕೆ. ಟಿ. ಮಹೇಶ್ ಎಂಬವರು ಬೆಳಿಗ್ಗೆ ಅಂಗಡಿ ಬಾಗಿಲು ತೆಗೆದಾಗ ಅಪರಿಚಿತರಿಬ್ಬರು ಅಂಗಡಿಗೆ ಬಂದು ನಮ್ಮ ಕಾರಿನಲ್ಲಿ 35 ಕೆ.ಜಿ. ಕಾಳು ಮೆಣಸಿದೆ. ಕಾರು ಪಕ್ಕದಲ್ಲೆ ಪಂಚರಾಗಿ ನಿಂತಿದೆ ಮೆಣಸನ್ನು ಬಂದು ನೋಡುವಂತೆ ಕರೆದರು. ಮಾಲೀಕ ಮಹೇಶ್ ತನ್ನ ಜೇಬಿನಲ್ಲಿದ್ದ ರೂ. 2 ಲಕ್ಷ ಹಣವನ್ನು ಡ್ರಾದಲ್ಲಿ ಇಟ್ಟು ಅಪರಿಚಿತನೊಂದಿಗೆ ಕಾಳು ಮೆಣಸನ್ನು 100 ಅಡಿ ಅಂತರದಲ್ಲಿ ನಿಲ್ಲಿಸಿದ ಕಾರಿನ ಬಳಿ ನೋಡಿಕೊಂಡು ವಾಪಸ್ ಬಂದು ಅಂಗಡಿಯೊಳಗೆ ನೋಡಿದಾಗ ಗಲ್ಲಪೆಟ್ಟಿಗೆ ಬಾಗಿಲು ತೆರೆದು ಕೊಂಡಿರುವದು ಕಂಡು ಬಂತು. ಡ್ರಾದೊಳಗಡೆ ಇಟ್ಟಿದ್ದ ರೂ.2 ಲಕ್ಷ ಮಾಯವಾಗಿತ್ತು. ಅಪರಿಚಿತರು ಕಾರಿನೊಂದಿಗೆ ಪರಾರಿಯಾಗಿದ್ದರು.