ಮಡಿಕೇರಿ, ಜೂ. 17: ಕರ್ನಾಟಕÀ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ರಂಜಾóನ್ ಪ್ರಯುಕ್ತ “ಬ್ಯಾರಿ ಸಂಸ್ಕøತಿಯಲ್ಲಿ ರಂಜಾóನ್ ಉಪವಾಸ ಮತ್ತು ಝಕಾತ್” ಎಂಬ ವಿಷಯದ ಬಗ್ಗೆ ತಾ. 18 ರಂದು (ಇಂದು) ಪೂರ್ವಾಹ್ನ 11 ರಿಂದ 12 ರವರೆಗೆ ಸ್ಪಂದನ ಚಾನೆಲ್‍ನಲ್ಲಿ ನೇರಪ್ರಸಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಪಾಲ್ಗೊಳ್ಳಲಿದ್ದು, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಮತ್ತು ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿರುವರು. ಸಾರ್ವಜನಿಕರು ರಂಜಾóನ್ ಉಪವಾಸ ಮತ್ತು ಝಕಾತ್ ಬಗ್ಗೆ ಪ್ರಶ್ನೆಗಳನ್ನು ಕೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.