ಕೂಡಿಗೆ, ಜೂ. 20: ಅಕ್ರಮವಾಗಿ ಬೀಟೆ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಅಧಿಕಾರಿಗಳು ವಾಹನ ಹಾಗೂ ರೂ. 2 ಲಕ್ಷ ಮೌಲ್ಯದ ಮರವನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

7ನೇ ಹೊಸಕೋಟೆಯಿಂದ ಹೆಬ್ಬಾಲೆಯ ಅಡ್ಡ ರಸ್ತೆಗಾಗಿ ಮೈಸೂರು ಜಿಲ್ಲೆಯ ಸೂಳೆಕೋಟೆಗೆ ತೆರಳುತ್ತಿದ್ದ ಪಿಕ್‍ಅಪ್ ವಾಹನದ (ಕೆ.ಎ. 01 ಎಬಿ0491) ಮೇಲೆ ಸಂಶಯಗೊಂಡು ಪರಿಶೀಲಿಸಿದ ಸಂದರ್ಭ ಮರ ಸಾಗಾಟ ಮಾಡುತ್ತಿರುವದು ಪತ್ತೆಯಾಗಿದೆ. ಈ ಸಂಬಂಧ ಚಾಲಕ ಸಮೀರ್ ಎಂಬಾತನನ್ನು ಬಂಧಿಸಿ, ವಾಹನ ಹಾಗೂ ಮರವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಮೊನಿಷ್ ಪಾಷ, ಕಣಿವೆ ವಲಯದ ಫಿರೋಜ್ ಖಾನ್, ಪೂವಪ್ಪ, ಗಣೇಶ್, ಚಾಲಕ ವಾಸು ಪಾಲ್ಗೊಂಡಿದ್ದರು.