ಮಡಿಕೇರಿ, ಜೂ. 20: ವಿಟ್ಲದಲ್ಲಿ ನೆಲೆಸಿರುವ ಭಾಗಮಂಡಲ ನಿವಾಸಿ, ಪುರುಷೋತ್ತಮನ ಬಾವ ಪ್ರಕಾಶ್ ಹಾಗೂ ತಂಗಿ ಸೌಮ್ಯ ಅಪಾಯದಲ್ಲಿ ಸಿಲುಕಿಕೊಂಡಿದ್ದ ಪುರುಷೋತ್ತಮ ಹಾಗೂ ಸ್ನೇಹಿತ ಚೆಲುವರಾಜ್‍ರನ್ನು ಸ್ವದೇಶಕ್ಕೆ ಕರೆತರಲು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ.ಮಲೇಷಿಯಾದ ಕೌಲಲಾಂಪುರ ವಿಮಾನ ನಿಲ್ದಾಣದಲ್ಲಿ ಆ ದೇಶದ ಸುರಕ್ಷಾ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಕುರಿತು, ಬಾಂಗ್ಲಾ ಮೂಲದ ವ್ಯಕ್ತಿ ರವಾನಿಸಿದ ವಾಟ್ಸ್‍ಆ್ಯಪ್ ಸಂದೇಶದಲ್ಲಿ ಪುರುಷೋತ್ತಮ ತನ್ನ ಕೈ ಬರಹದಿಂದ ತಿಳಿಸಿದ್ದ ವಿಷಯವನ್ನು ಕಂಡು ಕಂಗಾಲಾಗುತ್ತಾರೆ.