ಸಿದ್ದಾಪುರ, ಜೂ. 21: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಳೀಯ ಕಾರ್ಯಕರ್ತರು ಸಿದ್ದಾಪುರ ಘಟಕದ ಅಧÀ್ಯಕ್ಷ ಎ.ಪಿ. ಶಾಹುಲ್ ನೇತೃತ್ವದಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಬಳಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲಿನಲ್ಲಿ ಬೆಳೆದು ನಿಂತಿದ್ದ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಿದರು.

ಈ ಸಂದರ್ಭ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ಎಂ ಶೌಕತ್ ಅಲಿ, ಎ. ಎಸ್ ಹುಸೈನ್ ಪಕ್ಷದ ಪ್ರಮುಖರಾದ ಹಸ್ಸನ್, ಅಶ್ರಫ್, ಬಾಪು, ಶಫೀಕ್, ಹನೀಫ ಸೇರಿದಂತೆ ಮತ್ತಿತರರು ಇದ್ದರು.