ಗೋಣಿಕೊಪ್ಪಲು, ಜೂ. 21: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಗೋಣಿಕೊಪ್ಪಲಿನ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆ ವತಿಯಿಂದ ಚೈತನ್ಯ ಹಾಲ್ ಇದಾಯಿತ್ ಸೆಂಟರ್‍ನಲ್ಲಿ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು. ಗೋಣಿಕೊಪ್ಪ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆಯ ಅಧ್ಯಕ್ಷ ತನ್ವೀರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿನ್ನ-ಬೆಳ್ಳಿ ವರ್ತಕರ ಸಂಘದ ಗೌರವಾಧ್ಯಕ್ಷರು, ಜಯಲಕ್ಷ್ಮಿ ಜ್ಯುವೆಲ್ಲರಿಯ ಮಾಲೀಕ ಎಂ.ಜಿ. ಮೋಹನ್, ಮಂಗಳೂರಿನ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆಯ ಉಪಾಧ್ಯಕ್ಷ ಕೆ.ಪಿ. ಮುಹಮ್ಮದ್ ಇಸ್ತಾಕ್, ಗೋಣಿಕೊಪ್ಪಲಿನ ದಂತ ವೈದ್ಯ ಡಾ. ಸೂರಜ್ ಉತ್ತಪ್ಪ ಮಾತನಾಡಿದರು. ಹಿರಿಯರಾದ ಲಕ್ಷ್ಮಣ್, ಕಾವೇರಿ ಹಿಲ್ಸ್ ಬಡಾವಣೆಯ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್, ಹೆಚ್.ಕೆ. ಚೆಲುವ, ಶಾಂತೆಯಂಡ ಮಧು ಮಾಚಯ್ಯ, ರಾಮಚಾರಿ, ಜಪ್ಪಕೊಲ್ಲಿ ಕುಮಾರ, ನಜೀರ್ ಅಹಮ್ಮದ್, ಕುಲ್ಲಚಂಡ ಗಣಪತಿ, ಜೆ.ಕೆ. ಸೋಮಣ್ಣ, ಮುರುಗ, ಅಬ್ದುಲ್ ಸಮ್ಮದ್, ಅಬ್ದುಲ್ ರೆಹಮಾನ್ ಬಾಪು, ಮುಂತಾದವರು ಹಾಜರಿದ್ದರು.