ಚೆಟ್ಟಳ್ಳಿ, ಜೂ. 24: ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ನಿನ್ನೆ ದಿನ ಗೋಣಿಕೊಪ್ಪದ ಹಿರಿಯ ಕಾಂಗ್ರೆಸ್ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಮ್ಮಡ ಕರುಂಬಯ್ಯ ಅವರ ನಿವಾಸಕ್ಕೆ ತೆರಳಿ ಉಭಯಕುಶಲೋಪರಿ ನಡೆಸಿದರು.

ಕರುಂಬಯ್ಯ ಅವರು ತಮ್ಮ ಅನಾರೋಗ್ಯದ ಪರಿಣಾಮ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗದ ಕಾರಣ ಸಚಿವರೊಂದಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜಿಲ್ಲಾ ಅಧ್ಯಕ್ಷರ ಗೊಂದಲದ ಬಗ್ಗೆ ಸಚಿವರೊಂದಿಗೆ ಕರುಂಬಯ್ಯ ಅವರು ಪ್ರಶ್ನಿಸಲಾಗಿ ಅದಕ್ಕೆ ಸಚಿವರು ಮುಂದಿನ ವಾರದಲ್ಲಿ ಪ್ರಕಟಪಡಿಸಲಾಗುವದೆಂದರು. ಅನಂತರ ಅವರ ಪುತ್ರಿ ನೀಡಿದ ಲಘುಫಲಹಾರ ಸ್ವೀಕರಿಸಿ ವೀರಾಜಪೇಟೆ ಕಡೆ ತೆರಳಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಬಿದ್ದಾಟಂಡ ತಮ್ಮಯ್ಯ, ತೀತಿರ ಧರ್ಮಜ, ಪುತ್ತರಿರ ಪಪ್ಪು ತಿಮ್ಮಯ್ಯ ಹಾಜರಿದ್ದರು.