*ಗೋಣಿಕೊಪ್ಪಲು, ಜೂ. 24: ಓದುಗರ ಪ್ರತಿಭೆ ಅಭಿವ್ಯಕ್ತಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಬೆಟ್ಟ ಪಂಚಾಯ್ತಿ ಗ್ರಂಥಾಲಯ ಡಿಜಿಟಲ್ ಆಗಿ ಮಾರ್ಪಾಡಾಗಿದೆ. ಶಾಸಕ ಕೆ.ಜಿ. ಬೋಪಯ್ಯ ಗ್ರಂಥಾಲಯ ಡಿಜಿಟಲೀಕರಣಕ್ಕೆ ಚಾಲನೆ ನೀಡುವ ಮೂಲಕ ಜಿಲ್ಲೆಯಲ್ಲಿ ಪ್ರಥಮವಾಗಿ ಈ ಪ್ರಯೋಗ ಜಾರಿಯಾಗಿದ್ದು, ಓದುಗರ ಅಭಿರುಚಿಗೆ ಹೊಸತನದ ಪ್ರಯೋಗ ಸೇರ್ಪಡೆ ಯಾಗಿದೆ. ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಮೂಲಕ ಈ ಯೋಜನೆ ಅನುಷ್ಠಾನ ಗೊಳಿಸಲಾಗಿದ್ದು, ಪ್ರಾಯೋಗಿಕವಾಗಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಡಿಜಿಟಲೀ ಕರಣವಾಗಿದೆ. ಬೆಂಗಳೂರು ನಗರ ದೊಡ್ಡಜಾಲ ಪಂಚಾಯ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕಣ್ಣಮಂಗಲ ಪಂಚಾಯ್ತಿ, ಬೆಳಗಾವಿ ಜಿಲ್ಲೆ, ಶಿರಗುಪ್ಪಿ, ಗದಗ ಜಿಲ್ಲೆಯ ಬಿಂಕದಕಟ್ಟಿ, ಹುಲಕೋಟಿ, ರೆಡ್ಡೇರ ನಾಗನೂರ, ಹಾವೇರಿ, ಆಗಡಿ, ಉತ್ತರ ಕನ್ನಡ, ಕಡಲೆ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಗೊಂಡಿದೆ. ಕೊಡಗಿನಲ್ಲಿ ಪ್ರಥಮವಾಗಿ ಪಾಲಿಬೆಟ್ಟ ಪಂಚಾಯ್ತಿ ಗ್ರಂಥಾಲಯ ಡಿಜಿಟಲೀಕರಣಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಇಂಟರ್‍ನೆಟ್ ಹಾಗೂ ಗಣಕೀಕರಣ ಎಲ್ಲಾ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ಸರಕಾರವು

(ಮೊದಲ ಪುಟದಿಂದ) ಗ್ರಾ.ಪಂ.ಗಳಲ್ಲಿ ಈ ಲೈಬ್ರರಿಗಳನ್ನು ಮಿಂಟಿ ಬುಕ್ ಆಪ್ ಸಹಯೋಗದೊಂದಿಗೆ ಅನುಷ್ಠಾನಗೊಳಿಸಿ, ಓದುಗರಲ್ಲಿ ಹೊಸತನ ತುಂಬಲು ಮುಂದಾಗಿದೆ. ಈ ಲೈಬ್ರರಿ ಯೋಜನೆಯು ವೈ-ಫೈ ಹಾಗೂ ಇಂಟರ್‍ನೆಟ್ ಹೊಂದಿರುವ ಈ ಬುಕ್ ಕ್ಲಬ್ ಉಪಕರಣದ ಮೂಲಕ ಮೊಬೈಲ್ ಟ್ಯಾಬ್ಲೈಟ್‍ಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳು, ಇಂಗ್ಲಿಷ್ ಭಾಷೆಯ ವಿಡಿಯೋಗಳು, ಕಾದಂಬರಿ, ಸಾಹಿತ್ಯ, ಕಥೆ, ಕಾವ್ಯ ಮತ್ತು ಕನ್ನಡ ಭಾಷೆಯ ಆರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಲ್ಲಿ ಓದಬಹುದಾಗಿದೆ.

ರಾಜ್ಯ ಮತ್ತು ಕೇಂದ್ರದ ಪಠ್ಯ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನುಕೂಲವಾಗುವ ಪುಸ್ತಕಗಳು, ಇಂಗ್ಲಿಷ್ ಹಾಗೂ ಸ್ಥಳೀಯ ದಿನಪತ್ರಿಕೆಗಳು ಹಾಗೂ ಹಲವು ಮಾಹಿತಿಗಳನ್ನೊಳಗೊಂಡ ದೊಡ್ಡ ಗ್ರಂಥ ಭಂಡಾರವನ್ನು ಡಿಜಿಟಲ್ ಲೈಬ್ರರಿ ಮಿಂಟ್ ಬಾಕ್ಸ್ ಹೊಂದಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿಂಟ್ ಬಾಕ್ಸ್ 15 ರಿಂದ 20 ಮೀಟರ್ ವ್ಯಾಪ್ತಿಯೊಳಗೆ ವೈ-ಫೈ ಹೊಂದಿದ್ದು, ಗ್ರಂಥಾಲಯದಲ್ಲಿ ಸುಮಾರು ಆರು ಟ್ಯಾಬ್‍ಗಳು ಕಾರ್ಯನಿರ್ವಹಿಸುತ್ತದೆ. ತಮ್ಮ ಸ್ವಂತ ಮೊಬೈಲ್‍ಗಳಲ್ಲೂ 20 ಮೀಟರ್‍ನ ಒಳಗೆ ಬಳಸಬಹುದಾಗಿದೆ. ಮಿಂಟ್ ಬುಕ್ ಆಪ್ ಬಳಕೆದಾರರು ತಮ್ಮ ಈ ಮೇಲ್ ಐಡಿಯನ್ನು ಬಳಸಬೇಕು.

ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ರಕ್ಷಿಸುವದು ಹೆಚ್ಚು ವೆಚ್ಚವಾಗುವಂತದ್ದು, ಗ್ರಂಥಾಲಯಗಳು ಡಿಜಟಲೀಕರಣಗೊಳ್ಳುವದರಿಂದ ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಓದುಗರಿಗೆ ತಲುಪಲಿದೆ. ಪ್ರಸಿದ್ದ, ಬರಹಗಾರರ ಬರಹಗಳನ್ನು ಓದುವ ಅವಕಾಶ ಇದರಿಂದ ದೊರಕಲಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಯುವಕರಿಗೆ ಇದರಿಂದ ಬಹಳ ಪ್ರಯೋಜನಕಾರಿ. ಇಂದಿನ ಯುವಪೀಳಿಗೆ ಓದುವ ಅಭಿರುಚಿಯನ್ನು ಕಳೆದುಕೊಳ್ಳದಿರಲು ಗ್ರಂಥಾಲಯ ಡಿಜಿಟಲೀರಣದಿಂದ ಹೊಸತನದಲ್ಲಿ ಗ್ರಂಥಾಲಯ ಹಾಗೂ ಓದುಗರ ನಡುವಿನ ಸ್ನೇಹ ಬೆಸುಗೆಗೆ ಕಾರಣವಾಗುತ್ತಿದೆ.

ಜಿಲ್ಲೆಯಲ್ಲೇ ಪ್ರಥಮವಾಗಿ ಗ್ರಂಥಾಲಯ ಡಿಜಿಟಲೀಕರಣ ಗೊಂಡಿದ್ದು ಹೆಮ್ಮೆಯ ವಿಚಾರ ಓದುಗರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಂದಿನ ಕಾಲಘಟಕ್ಕೆ ತಕ್ಕಂತೆ ಗ್ರಂಥಾಲಯ ಮಾರ್ಪಾಡಾಗುತ್ತಿದೆ. ಯುವ ಸಮುದಾಯ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಬೋಪಯ್ಯ ಹೇಳಿದರು

ಪಾಲಿಬೆಟ್ಟ ಗ್ರಾ.ಪಂ. ಗ್ರಂಥಾಲಯವನ್ನು ಶಾಸಕರು ಚಾಲನೆ ನೀಡಿದ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಪಿ.ಡಿ.ಒ ಅಬ್ದುಲ್ಲಾ, ಹೊಸೂರು ಗ್ರಾ.ಪಂ. ಅಧ್ಯಕ್ಷ ಗೋಪಿ ಚಿಣ್ಣಪ್ಪ, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಲೀಲಾವತಿ, ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕ ಯೋಗೇಶ್ ಹಾಗೂ ಗ್ರಾ.ಪಂ. ಸದಸ್ಯರು ಹಾಜರಿದ್ದರು.

-ಎನ್.ಎನ್.ದಿನೇಶ್.