ಸಿದ್ದಾಪುರ, ಜೂ. 26: ರಂಜಾನ್ ಹಬ್ಬದ ಪ್ರಯುಕ್ತ ನೆಲ್ಲಿಹುದಿಕೇರಿ ಡೋಮಿನೋಸ್ ಕ್ಲಬ್ ವತಿಯಿಂದ ಸಂಘದ ಕಚೇರಿಯಲ್ಲಿ ರಂಜಾನ್ ಇಫ್ತ್ಯಾರ್ ಕೂಟ ಏರ್ಪಡಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ನೆಲ್ಯಹುದಿಕೇರಿಯ ಡೋಮಿನೋಸ್ ಯುವಕ ಸಂಘ ವಿವಿಧ ಸಮಾಜ ಸೇವೆಯಲ್ಲಿ ತೊಡಗಿದ್ದು, ಪರಿಸರ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದೆ.

ನೆಲ್ಲಿಹುದಿಕೇರಿಯ ಡೋಮಿನೋಸ್ ಯುವಕ ಸಂಘದ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ ಭೇದÀವನ್ನು ಮರೆತು ಅಧಿಕ ಸಂಖ್ಯೆಯಲ್ಲಿ ಗಣ್ಯರು ಪಾಲ್ಗೊಂಡು ವಿಧ ವಿಧದ ಖಾದ್ಯಗಳು ಹಾಗೂ ಹಣ್ಣು-ಹಂಪಲುಗಳನ್ನು ಸವಿದು ಪರಸ್ಪರ ರಂಜಾನ್ ಹಬ್ಬದ ಶುಭಾಶÀಯಗಳನ್ನು ಕೋರುವ ಮೂಲಕ ಇಫ್ತ್ಯಾರ್ ಕೂಟವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭ ಡೋಮಿನೋಸ್ ಕ್ಲಬ್‍ನ ಅಧ್ಯಕ್ಷ ಶೌಕತ್ ಅಲಿ, ಸಹ ಕಾರ್ಯದರ್ಶಿ ಶಿಹಾಬುದ್ದೀನ್, ಕೋಶಾಧಿಕಾರಿ ನೌಫಲ್, ಸಿದ್ದಾಪುರ ಪತ್ರಕರ್ತ ಸಂಘದ ಅಧ್ಯಕ್ಷ ಎ.ಎನ್. ವಾಸು, ಕೋಶಾಧಿಕಾರಿ ಅಜೀಜ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಗ್ರಾ.ಪಂ. ಸದಸ್ಯ ಅಫ್ಸಲ್ ಹಾಗೂ ನೆಲ್ಯಹುದಿಕೇರಿ ಡೋಮಿನೋಸ್ ಕ್ಲಬ್ ಪದಾಧಿಕಾರಿಗಳಾದ ಸಮದ್, ಶಕೀರ್ ಮತ್ತಿತರರು ಹಾಜರಿದ್ದರು.