ವೀರಾಜಪೇಟೆ, ಜೂ. 26: ತಾ. 23 ರಂದು ಕಡಂಗಮರೂರು ಬೆಳ್ಳುಮಾಡು ಜಂಕ್ಷನ್‍ನಲ್ಲಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದು, ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಮೋಹಿನಿ ದೂರಿದ್ದಾರೆ.

ಸರಕಾರದ ಕಾರ್ಯಕ್ರಮಗಳಿಗೆ ಇಲಾಖೆಯವರು ರಾಜಕೀಯ ರಹಿತವಾಗಿ ಜನಪ್ರತಿನಿಧಿಗಳನ್ನು ಆ ವ್ಯಾಪ್ತಿಯ ಪ್ರತಿಯೊಂದು ಸಮಾರಂಭಕ್ಕೂ ಆಹ್ವಾನಿಸಬೇಕು. ಆದರೆ ವೀರಾಜಪೇಟೆ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳು ಶಿಷ್ಟಾಚಾರವನ್ನು ಪಾಲಿಸದೆ ಜನಪ್ರತಿನಿಧಿಗಳನ್ನು ಉದ್ದೇಶಪೂರ್ವಕ ವಾಗಿ ಕಡೆಗಣಿಸಿದ್ದಾರೆ. ಕಾರ್ಯಕ್ರಮಕ್ಕೆ ಈ ವಿಭಾಗದ ಕಾಕೋಟುಪರಂಬು ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರನ್ನು ಆಹ್ವಾನಿಸಿಲ್ಲ. ಆಹ್ವಾನ ಪತ್ರದಲ್ಲಿ ಇವರುಗಳ ಹೆಸರನ್ನು ಮುದ್ರಿಸದಿರು ವದು ಇಲಾಖೆಯ ಲೋಪವಾಗಿದೆ. ಈ ಸಂಬಂಧ ಇಲಾಖೆಯ ಸಚಿವರು - ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡುವದಾಗಿ ಮೋಹಿನಿ ತಿಳಿಸಿದ್ದಾರೆ.