ಸುಂಟಿಕೊಪ್ಪ, ಜೂ. 28: ನಮ್ಮ ಕಾಯಕದ ಜೊತೆಯಲ್ಲಿ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ ಎಂದು ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಅಭಿಪ್ರಾಯಪಟ್ಟರು.ಇಲ್ಲಿನ ಸ್ವಾಮಿ ಇಂಜಿನಿಯರ್ ವರ್ಕ್‍ನ ಆವರಣದಲ್ಲಿ ನಡೆದ ವರ್ಕ್‍ಶಾಪ್ ಮಾಲೀಕರ ಸಂಘದ 17ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ಬದುಕನ್ನು ರೂಪಿಸಲು ಈ ಕಾರ್ಯವನ್ನು ಮಾಡುತ್ತಿದ್ದೇವೆ. ಕೇವಲ ಅದರಲ್ಲಿಯೇ ತೃಪ್ತಿ ಪಡದೇ ಸಮಾಜ ಸೇವೆ ಮಾಡುತ್ತಾ ಸಂತೋಷದ ಜೀವನ ಸಾಗಿಸೋಣ. ಸರ್ವಾಂಗೀಣ ಅಭಿವೃದ್ದಿಗೆ ಮತ್ತು ಸ್ವಚ್ಛತೆಗೆ ಒತ್ತು ಕೊಡುವದರ ಮೂಲಕ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.ಪದಾಧಿಕಾರಿಗಳ ಆಯ್ಕೆ ನಡೆದು ವಿ.ಎ. ಸಂತೋಷ್ ಅವರನ್ನು ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರುಗಳಾಗಿ ಹೆಚ್. ಗಂಗಾದರ್, ಹೆಚ್.ಸೋಮಣ್ಣ, ಉಪಾಧ್ಯಕ್ಷರಾಗಿ ಸಿ.ಕೆ.ರವಿ, ಪ್ರದಾನ ಕಾರ್ಯದರ್ಶಿಯಾಗಿ ಬಿ.ಎಸ್. ರಮೇಶ್, ಸಹ ಕಾರ್ಯದರ್ಶಿಯಾಗಿ ಹೂವೇಗೌಡ, ಖಜಾಂಚಿಯಾಗಿ ಕೆ.ಪಿ. ವಿನೋದ್, ಸಂಘಟನಾ ಕಾರ್ಯ ದರ್ಶಿಯಾಗಿ ಕೆ.ಸತೀಶ್, ರಜಾಕ್, ನಿರ್ದೇಶಕರುಗಳಾಗಿ ಪಿ.ಆರ್. ಸುನಿಲ್ ಕುಮಾರ್, ಅನೀಸ್, ಕೆ.ಜಿ. ಸತೀಶ್, ಸುರೇಶ್ ಬಿ, ತಂಗವೇಲು, ಆರ್.ಸುರೇಶ್, ಕೆ.ಜಿ. ರಮೇಶ್, ಜೇಸು ದಾಸ್ ಹಾಗೂ 19 ಜನ ಕಾರ್ಯಕಾರಿ ಮಂಡಳಿಗೆ ನೇಮಕಗೊಳಿಸಲಾಯಿತು.

ಪ್ರದಾನ ಕಾರ್ಯದರ್ಶಿ ಪಿ.ಆರ್.ಸುನಿಲ್ ಕುಮಾರ್ ಸ್ವಾಗತಿಸಿ, ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.