ಸುಂಟಿಕೊಪ್ಪ, ಜೂ.30: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ನಿಲ್ಲಿಸಿದ್ದ ಕಾರಿಗೆ ರಭಸದಿಂದ ಬಂದ ಕಾರು ಡಿಕ್ಕಿಯಾಗಿ ಗೋದಾಮು ಹಾಗೂ ಕಾರಿಗೆ ಜಖಂ ಆಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯಿಂದ ಕಾರು (ಕೆಎ12 ಜಡ್ 0243) ಚಾಲಿಸಿಕೊಂಡು ಬರುತ್ತಿದ್ದಾಗ ಅಕ್ಕಪಂಡ ಸುರೇಶ್ ಎಂಬವರು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುವಾಗ ನಿಯಂತ್ರಣ ತಪ್ಪಿದ ಪರಿಣಾಮ ವಿಜಯ ಪ್ಲಾಂಟೇಷನ್ ಮುಂಭಾಗದಲ್ಲಿ ಅದರ ಮಾಲೀಕರು ನಿಲ್ಲಿಸಿದ ಕಾರು (ಕೆಎ12 ಜಡ್ 2315ಕ್ಕೆ) ಕಾರಿಗೆ ಡಿಕ್ಕಿಯಾಗಿ ನುಗ್ಗಿದ ಕಾರು ಪ್ಲಾಂಟೇಷನ್‍ನ ಗೋದಾಮಿಗೆ ಡಿಕ್ಕಿಯಾಗಿದೆ. ಇದರಿಂದ ಕಾರಿಗೆ ಹಾಗೂ ಗೋದಾಮಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.