ಶನಿವಾರಸಂತೆ, ಜು. 1: ಶನಿವಾರಸಂತೆ ಪಟ್ಟಣದ ಮಸೀದಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಸರಕಾರಿ ಬಸ್‍ಗೆ ಡಿಕ್ಕಿ ಪಡಿಸಿ ಸವಾರರಿಬ್ಬರು ಬಿದ್ದು ಗಾಯಗೊಂಡ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹುಲುಸೆ ಗ್ರಾಮದ ಹೆಚ್. ಇ. ಜಯಪ್ಪ ಶನಿವಾರಸಂತೆಗೆ ತೆರಳಲು ತನ್ನ ಸ್ನೇಹಿತ ಸೀಗೆಮರೂರು ಗ್ರಾಮದ ನಾಗರಾಜು ಯಾನೆ ಸಂಪತ್ತು ಅವರ ಮೋಟಾರ್ ಸೈಕಲ್ (ಎಂ-12-ಎ-3357)ನಲ್ಲಿ ಹೋಗುತ್ತಿರುವಾಗ ಮಸೀದಿಯ ಹತ್ತಿರ ಎದುರಿನಿಂದ ಬರುತ್ತಿದ್ದ ಸರಕಾರಿ ಬಸ್ (ಎಂ-57-ಈ-1062)ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಬಿದ್ದು ಕಾಲು, ಕೈಗೆ ಗಾಯವಾಗಿದ್ದು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲುಗೊಳಿಸಲಾಗಿದೆ. ಶನಿವಾರಸಂತೆ ಠಾಣೆಯ ಸಹಾಯಕ ಠಾಣಾಧಿಕಾರಿ ಹೆಚ್. ಎಂ. ಗೋವಿಂದ ಅವರು ಸರಕಾರಿ ಬಸ್ಸು ಹಾಗೂ ಮೋಟಾರ್ ಸೈಕಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.