ಮಡಿಕೇರಿ, ಜು. 3: ಮಡಿಕೇರಿ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಯನ್ಸ್‍ನ ಸಭಾ ಭವನದಲ್ಲಿ ಇತ್ತೀಚೆಗೆ ನೆರವೇರಿತು.ಅಧ್ಯಕ್ಷರಾಗಿ ಕೆ.ಎ. ಬೊಳ್ಳಪ್ಪ ಹಾಗೂ ಲಯನೆಸ್ ಕವಿತಾ ಕಾವೇರಮ್ಮ, ಕಾರ್ಯದರ್ಶಿಯಾಗಿ ಮಧುಕರ್ ಕೆ. ಹಾಗೂ ಗೀತಾ ಮಧುಕರ್, ಖಜಾಂಚಿಯಾಗಿ ನಂಜಪ್ಪ ಬಿ.ಸಿ. ಹಾಗೂ ವಿಲ್ಮಾ ನಂಜಪ್ಪ, ಉಪಾಧ್ಯಕ್ಷರಾಗಿ ದಾಮೋದರ್, ಬಾಬುಚಂದ್ರ ಉಳ್ಳಾಗಡ್ಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಮಧುಕರ್ ಶೇಟ್ ಡಿ., ನೂತನ ಸದಸ್ಯರ ಸಮಿತಿ ಅಧ್ಯಕ್ಷರಾಗಿ ನವೀನ್ ಎ.ಕೆ., ನಿರ್ದೇಶಕರಾಗಿ ಪ್ರಕಾಶ್ ಎಂ.ಜಿ., ರವಿ ಎನ್.ಜಿ., ನಿರಂಜನ್ ಎಂ.ಎ., ಲಯನ್ ಖಿಚಿiಟ ಖಿತಿisಣeಡಿ ಆಗಿ ಎಸ್.ಬಿ. ಮುರುಗೇಶ್, ಲಯನ್ ಟೇಮರ್ ಆಗಿ ಸಂತೋಷ್ ಅಣ್ವೇಕರ್ ಇದೇ ಸಂದರ್ಭದಲ್ಲಿ 2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ ಸಾಹಿತಿಯೂ ಆದ ಹೆಚ್.ಸಿ. ಮಹೇಶ್ ಕನ್ನಡ ವಚನಗಳನ್ನು ಹೇಳುವದರ ಮೂಲಕ ಪದಗ್ರಹಣ ಸಮಾರಂಭವನ್ನು ನಡೆಸಿಕೊಟ್ಟರು. ಗೀತಾ ಮಧುಕರ್ ಹಾಗೂ ಪ್ರತಿಭಾ ಮಧುಕರ್ ಪ್ರಾರ್ಥಿಸಿದರು. ದಿನೇಶ್ ರಾವ್ ಧ್ವಜ ವಂದನೆ, ಸಂಗೀತಾ ಮೋಹನ್‍ದಾಸ್ ಲಯನ್ಸ್‍ನ ನೀತಿ ಸಂಹಿತೆಯನ್ನು ಓದಿದರು. ಲಯನ್ಸ್‍ನ ಮಾಜಿ ಅಧ್ಯಕ್ಷ ಅಗಸ್ಟಿನ್ ಜಯರಾಜ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಮಧುಕರ್ ಕೆ. ವಂದಿಸಿದರು.

ವೇದಿಕೆಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ರತ್ನಾ ಚರ್ಮಣ್ಣ, ವಲಯಾಧ್ಯಕ್ಷ ಅಚ್ಚಯ್ಯ, ಸೋಮಣ್ಣ, ಕಾರ್ಯದರ್ಶಿ ಫಾದರ್ ಇಗ್ನೇಷಿಯಸ್ ಮಸ್ಕರೇನಸ್, ಲಯನೆಸ್ ಅಧ್ಯಕ್ಷೆ ಕವಿತಾ ಕಾವೇರಮ್ಮ ಉಪಸ್ಥಿತರಿದ್ದರು.