ನಾಪೆÉÇೀಕ್ಲು, ಜು. 4: ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಮುಕ್ಕಾಟಿರ ಶಿವು ಮಾದಪ್ಪ ಅವರಿಗೆ ನಾಪೆÉÇೀಕ್ಲು ವಲಯ ಕಾಂಗ್ರೆಸ್‍ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.ನಾಪೆÇೀಕ್ಲು ಮಾರುಕಟ್ಟೆ ಬಳಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟ್ಟಿರ ಕುಶು ಕುಶಾಲಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಲೀಂ ಹಾರೀಸ್ ಹೂವಿನ ಹಾರ ಹಾಕುವದರ ಮೂಲಕ ಸ್ವಾಗತಿಸಿದರು.ಈ ಸಂದರ್ಭ ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ರೋಷನ್, ನಾಯಕರಾದ ಕೊಟ್ಟಮುಡಿ ಹಂಸ, ಕುಲ್ಲೇಟಿರ ಅರುಣ ಬೇಬಾ, ಅರೆಯಡ ಸೋಮಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಮುತ್ತಪ್ಪ, ಕೊಂಡೀರ ಸುರೇಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಶಾಫಿ ಎಡಪಾಲ, ಬೊಳ್ಳಂಡ ಸರಿ, ಮಹಮ್ಮದ್ ವೈ.ಎಂ. ಉಸ್ಮಾನ್, ಇದ್ದರು.

ಇಗ್ಗುತ್ತಪ್ಪ ದೇವಳಕ್ಕೆ ಭೇಟಿ : ನಂತರ ಅವರು ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಬಾಚಮಂಡ ರಾಜಾ ಪೂವಣ್ಣ, ಲವ ಚಿಣ್ಣಪ್ಪ, ಭರತ್, ನೆರವಂಡ ಉಮೇಶ್, ಕಲಿಯಂಡ ಸಂಪನ್ ಅಯ್ಯಪ್ಪ, ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಉಪಾಧ್ಯಕ್ಷ ಉಸ್ಮಾನ್, ಮುಂಖಂಡ ಅದಪೆÇಳೆ ಮಹಮ್ಮದ್ ಹಾಜಿ ಇದ್ದರು. ಬಳಿಕ ಅವರು ಎಮ್ಮೆಮಾಡು ದರ್ಗಾ ಮತ್ತು ಶ್ರೀ ಮಕ್ಕಿ ಶಾಸ್ತಾವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.