ಬೆಂಗಳೂರು, ಜು. 4: ಮಾಜಿ ಸಚಿವ, ಮಾಜಿ ಸಂಸದ ಹೆಚ್. ವಿಶ್ವನಾಥ್ ಜೆಡಿಎಸ್‍ಗೆ ಅಧಿಕೃತ ಸೇರ್ಪಡೆಗೊಂಡರು. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರನ್ನು ಪಕ್ಷಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸ್ವಾಗತಿಸಿದರು. ಈ ಸಂದರ್ಭ ಅವರೊಂದಿಗೆ ಕೆಆರ್ ನಗರ, ಮೈಸೂರು, ತೇರದಾಳ, ದಾವಣಗೆರೆಗಳ ಅಪಾರ ಮುಖಂಡರೂ ಜೆಡಿಎಸ್ ಸೇರ್ಪಡೆಗೊಂಡರು. ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಬಸವರಾಜ್ ಕೂಡ ಜೆಡಿಎಸ್ ಸೇರಿದರು.

ಸಂಸದ ಪುಟ್ಟರಾಜು, ಮುಖಂಡರಾದ ಜೆ.ಟಿ. ದೇವೇಗೌಡ, ಸಾ.ರಾ. ಮಹೇಶ್, ಮಧು ಬಂಗಾರಪ್ಪ, ಚಿಕ್ಕಮಾದು, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪುರ್ ಉಪಸ್ಥಿತರಿದ್ದರು.