ಮಡಿಕೇರಿ, ಜು. 7: ಕರ್ನಾಟಕ ಟೆಕ್ವಾಂಡೊ ಸಂಸ್ಥೆ ಹಾಗೂ ಶಿವಮೊಗ್ಗ ಟೆಕ್ವಾಂಡೊ ಸಂಸ್ಥೆ ವತಿಯಿಂದ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ 14 ವರ್ಷದೊಳಗಿನವರ ಟೆಕ್ವಾಂಡೊ ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಪದಕಗಳನ್ನು ಗೆದ್ದಿದ್ದಾರೆ.

ಪ್ರಜ್ಞಾ ವೇಲಾಯುಧನ್ 1 ಬೆಳ್ಳಿ, ಕೋಚನ ರುಚಿ ಅರುಣ್ 1 ಚಿನ್ನ, 1 ಬೆಳ್ಳಿ, ಬೈಲೆರಾ ಚವಿಕ್ಷಾ ವಿಶ್ವನಾಥ್ 1 ಬೆಳ್ಳಿ, 1 ಕಂಚು ಬೈಲೆರಾ ಪ್ರೊನಿಕ್ಷಾ ವಿಶ್ವನಾಥ್ 2 ಬೆಳ್ಳಿ, ಕಟ್ರತನ ಧನಶ್ರೀ ವೆಂಕಟೇಶ್ 1 ಬೆಳ್ಳಿ ಪದಕ ಗಳಿಸಿದ್ದಾರೆ. ತಾನಿಯಾ ಬಿ.ಶಂಕರ್, ವರುಣ್ ಎನ್.ಎನ್.ವರುಣ್, ವರುಣ್ ಗಣಪತಿ, ಮಿನ್ನಂಡ ಯಶಸ್, ತುಳುನಾಡಂಡ ಉತ್ತಪ್ಪ ಅರುಣ್, ತೇಜಸ್ ವೇಲಾಯುಧನ್, ಕೃಷ್ಣ ಪಾಂಡಿ ಇವರಗಳು ಸ್ವರ್ಧಿಸಿದ್ದರು.

ಚಿನ್ನದ ಪದಕ ಗೆದ್ದಿರುವ ಕೋಚನ ರುಚಿ ಅರುಣ್ ಇದೇ ತಿಂಗಳು ಒರಿಸ್ಸಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಫ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾಳೆ ಎಂದು ತರಬೇತುದಾರ ಬಿ.ಜಿ.ಲೋಕೇಶ್ ರೈ ತಿಳಿಸಿದ್ದಾರೆ.