ಬಾಳೆಲೆ, ಜು. 8: ಹಿಂದೆ ಮೈಸೂರಿನಿಂದ ಬಾಳೆಲೆಗೆ ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ಬಾಳೆಲೆಯಿಂದ ರಾಜಪುರಕ್ಕೆ ವಿಸ್ತರಿಸಲಾಗಿದೆ. ಬಾಳೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರಥ್ಯು ಅವರು ಚಾಲನೆ ನೀಡಿದರು. ಬಸ್ ಸಂಚಾರವೇ ಇಲ್ಲದ ಈ ಗ್ರಾಮದ ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ ಸದುಪಯೋಗ ಪಡೆದುಕೊಂಡು ಉನ್ನತ ವ್ಯಾಸಂಗ ಮಾಡಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಅವರು ಕರೆ ನೀಡಿದರು.

ಬೆಳಿಗ್ಗೆ 8.30ಕ್ಕೆ ಕಾನೂರಿನಿಂದ ಹೊರಟು ಬಾಳೆಲೆಗೆ 9.5ಕ್ಕೆ ತಲುಪುವ ಹೊಸ ಬಸ್ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ ಎಂದು ಅವರು ತಿಳಿಸಿದರು. ಬಾಳೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೇಂಗಡ ಮಹೇಶ್, ಸದಸ್ಯರಾದ ಸುಶೀಲ, ನಾಲ್ಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಚನ್, ಬಾಳೆಲೆ ವಿಜಯಲಕ್ಷ್ಮಿ ವಿದ್ಯಾಸಂಸ್ಥೆ ಅಧ್ಯಕ್ಷ ಬೋಸ್ ಮಂದಣ್ಣ ಹಾಜರಿದ್ದರು.

ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಬಾಳೆಲೆಯಿಂದ ರಾಜಪುರಕ್ಕೆ ತೆರಳಲು ಉಚಿತ ಬಸ್ ಪಾಸ್ ವಿತರಿಸಿದರು. ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್ ಹಾಜರಿದ್ದರು.