ಆಲೂರು-ಸಿದ್ದಾಪುರ, ಜು. 8: ಆಲೂರು-ಸಿದ್ದಾಪುರ ಸೆಸ್ಕ್ ಉಪ ಶಾಖೆ ವತಿಯಿಂದ ಆಲೂರು-ಸಿದ್ದಾಪುರ ಮತ್ತು ಗಣಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗಿರಿಜನ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಸೋಲಾರ್ ದೀಪವನ್ನು ವಿತರಿಸಲಾಯಿತು.

ಆಲೂರು-ಸಿದ್ದಾಪುರ, ಕಡ್ಲೆಮಕ್ಕಿ, ಮಾಲಂಬಿ, ಗಣಗೂರು, ಆಡಿನಾಡೂರು ಗ್ರಾಮಗಳಲ್ಲಿ ನೆಲೆಸಿರುವ ಗಿರಿಜನ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಫಲಾನುಭವಿಗಳಿಗೆ ಆಲೂರು-ಸಿದ್ದಾಪುರ ಸೆಸ್ಕ್ ಶಾಖೆಯ ಶಾಖಾಧಿಕಾರಿ ರಂಗಸ್ವಾಮಿ ವಿದ್ಯುತ್ ಇಲಾಖೆಯಿಂದ ಉಚಿತವಾಗಿ ಮಂಜೂರಾದ ಸೋಲಾರ್ ದೀಪಗಳನ್ನು ಹಾಡಿಗೆ ತೆರಳಿ ಫಲಾನುಭವಿಗಳಿಗೆ ವಿತರಿಸಿದರು.