ಸೋಮವಾರಪೇಟೆ, ಜು. 9: ಸಮೀಪದ ಕೂಡುರಸ್ತೆಯ ಯರಗಳ್ಳಿ ಗ್ರಾಮದ ವಾಸದ ಮನೆಯಲ್ಲಿ ಬೀಡುಬಿಟ್ಟಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೋಮವಾರಪೇಟೆಯ ಸ್ನೇಕ್ ಅನೂಷ್ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.

ಯರಗಳ್ಳಿ ಗ್ರಾಮದ ಕುಶಾಲಪ್ಪ ಅವರ ಮನೆ ಆವರಣದಲ್ಲಿ ಬೀಡುಬಿಟ್ಟು ಮನೆಮಂದಿಗೆ ಭಯಾತಂಕವನ್ನು ಉಂಟುಮಾಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಮನೆಮಂದಿಯ ಆತಂಕವನ್ನು ದೂರಮಾಡಿದರು.