ಗೋಣಿಕೊಪ್ಪಲು, ಜು. 9: ಇಲ್ಲಿನ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಪರಿಮಳ ಮಂಗಳ ವಿಹಾರದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಸೋಮೆಯಂಡ ಪೂಣಚ್ಚ, ಉಪಾಧ್ಯಕ್ಷರಾಗಿ ಸ್ಮರಣ್ ಸುಭಾಷ್, ನೀತಿ ಬೆಳ್ಯಪ್ಪ, ಸಚಿನ್ ಬೆಳ್ಯಪ್ಪ, ಕಾರ್ಯದರ್ಶಿಯಾಗಿ ಸೋಮೇಯಂಡ ಪ್ರಣಿತ ಪೂಣಚ್ಚ, ಖಜಾಂಜಿಯಾಗಿ ಡಾ. ಅಮ್ಮಂಡ ಚಿಣ್ಣಪ್ಪ, ಲಯನ್ಸ್ ಮುಖ್ಯಸ್ಥರಾಗಿ ಸಿ.ಎಂ. ಸೋಮಣ್ಣ, ಕರುಂಬಯ್ಯ, ಗಣಪತಿ, ಸದಸ್ಯರ ಸಮಿತಿ ಅಧ್ಯಕ್ಷರಾಗಿ ಕೊಂಗಂಡ ಸುಬ್ಬಯ್ಯ ಪದಗ್ರಹಣ ಸ್ವೀಕರಿಸಿದರು.

ಮೈಸೂರು ಪ್ರಾಂತೀಯ ಮಾಜಿ ರಾಜ್ಯಪಾಲ ರಾಮತೀರ್ಥ ಅವರು ಪದಗ್ರಹಣ ಬೋಧಿಸಿದರು. ಈ ಸಂದರ್ಭ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿರ್ದೇಶಕರಾಗಿ ಕೆ.ಎಂ. ಅಯ್ಯಪ್ಪ, ಅಲ್ಲುಮಾಡ ಸುಲಿನ್, ಕೆ.ಪಿ. ಸುಬ್ರಮಣಿ, ಜಿ.ಎಸ್. ಮಾದಪ್ಪ, ಎಂ.ಎ. ಬಾಲಕೃಷ್ಣ, ಎಂ.ಬಿ. ಕರುಂಬಯ್ಯ, ಪಿ.ಎನ್. ಪೆಮ್ಮಯ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು.

ಅಳಮೇಂಗಡ ರಾಣಿ ದೇವಯ್ಯ ಪ್ರಾರ್ಥಿಸಿದರು. ಡಾ. ಅಮ್ಮಂಡ ಚಿಣ್ಣಪ್ಪ ಧ್ವಜ ವಂದನೆ ನೆರವೇರಿಸಿದರು. ನಿಕಟಪೂರ್ವ ಅಧ್ಯಕ್ಷ ಶರತ್ ದೇವಯ್ಯ, ಕಾರ್ಯದರ್ಶಿ ಕಳ್ಳೇಂಗಡ ನಿತಿನ್ ಪೂಣಚ್ಚ ಉಪಸ್ಥಿತರಿದ್ದರು.