ಭಾಗಮಂಡಲ, ಜು. 11: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುವದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವುಮಾದಪ್ಪ ಹೇಳಿದರು.

ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ಪ್ರಸ್ತುತ ಬರಗಾಲದ ಪರಿಸ್ಥಿತಿ ಇರುವದರಿಂದ ಉತ್ತಮ ಮಳೆಯಾಗಿ ನಾಡು ಸುಭಿಕ್ಷವಾಗಲಿ ಎಂದು ಅವರು ಪ್ರಾರ್ಥಿಸಿದರು. ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆ ಬಗ್ಗೆ ಗಮನ ಹರಿಸುವದಾಗಿ ಹೇಳಿದರು. ಪಕ್ಷದಲ್ಲಿ ಯಾವದೇ ಗುಂಪುಗಾರಿಕೆಗೆ ಅವಕಾಶವಿಲ್ಲ. ಎಲ್ಲ ಹಿರಿಯರು ತಟಸ್ಥರಾಗಿ ಉಳಿದಿರುವ ನಾಯಕರುಗಳ ವಿಶ್ವಾಸ ಪಡೆದು ಪಕ್ಷ ಸಂಘಟಿಸುವದಾಗಿ ಹೇಳಿದರು. ಕೊಡಗಿನಲ್ಲಿ ಮತ್ತೆ ಕಾಂಗ್ರೆಸ್ ಬರಬೇಕೆಂಬದು ಗುರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಬೇಕಲ್ ರಮಾನಾಥ್, ವಲಯಾಧ್ಯಕ್ಷ ಸುನಿಲ್ ಪತ್ರಾವೋ, ರವಿ ಹೆಬ್ಬಾರ್, ಕುದುಪಜೆ ಪ್ರಕಾಶ್, ದೇವಂಗೋಡಿ ಹರ್ಷ, ನಾಳಿಯಂಡ ಚಂಗಪ್ಪ, ಬಾರಿಕೆ ವೆಂಕಟರಮಣ, ಗ್ರಾ.ಪಂ. ಸದಸ್ಯೆ ಪ್ರಮೀಳ ಇನ್ನಿತರಿದ್ದರು.