ಮಡಿಕೇರಿ, ಜು. 11: ಹಿಂದಿನ ದಸರಾ ಬೈಲಾಕ್ಕೆ ತಿದ್ದುಪಡಿ ತರುವ ಸಲುವಾಗಿ ತಾ. 14ರಂದು ಮಡಿಕೇರಿ ಕಾವೇರಿ ಕಲಾಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಗೆ ಸಭೆ ಏರ್ಪಡಿಸಲಾಗಿದೆ.ದಸರಾ ಸಮಿತಿಯ ಪೋಷಕರೂ, ಶಾಸಕರೂ ಆದ ಎಂ.ಪಿ. ಅಪ್ಪಚ್ಚುರಂಜನ್ ಅವರ ಉಪಸ್ಥಿತಿಯಲ್ಲಿ, ಶಾಸಕರುಗಳಾದ ಎಂ.ಪಿ. ಸುನಿಲ್‍ಸುಬ್ರಮಣಿ, ವೀಣಾ ಅಚ್ಚಯ್ಯ, ಕರ್ನಾಟಕ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಇವರುಗಳ ಸಮ್ಮುಖದಲ್ಲಿ ಸಭೆ ನಡೆಯಲಿದೆ. ನಗರಸಭೆ ಹಾಗೂ ದಸರಾ ಸಮಿತಿಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದಸರಾದ ಏಳಿಗೆಗೆ ಶ್ರಮಿಸಿದ, ಶ್ರಮಿಸುತ್ತಿರುವ ಎಲ್ಲ ಹಿರಿಯರು, ಕಲಾವಿದರು, ದಶಮಂಟಪಗಳ ದಸರಾ ಬೈಲಾ ತಿದ್ದುಪಡಿ ಸಭೆ ಮಾಜೀ ಹಾಗೂ ಹಾಲಿ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು, ವಿವಿಧ ಸಮಾಜಗಳ ಪದಾಧಿಕಾರಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಕಲೆ-ಸಂಗೀತ-ಸಾಹಿತ್ಯಾಸಕ್ತರು ಹಾಗೂ ಪ್ರಜ್ಞಾವಂತ ನಾಗರಿಕರು. ಹಿಂದಿನ ಪುರಸಭೆ ಹಾಗೂ ಈಗಿನ ನಗರಸಭೆಯ ಮಾಜೀ ಹಾಗೂ ಹಾಲಿ ಸದಸ್ಯರುಗಳು, ದಸರಾ ಸಮಿತಿಯ ಮಾಜೀ ಹಾಗೂ ಹಾಲಿ ಪದಾಧಿಕಾರಿಗಳು ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕೆಂದು ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷ ಜಿ. ಚಿದ್ವಿಲಾಸ್ ಕೋರಿದ್ದಾರೆ.